Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಈಗಿರುವ ಸಂಸದರು ಬರ ಪರಿಸ್ಥಿತಿಯಲ್ಲೂ ಏನು ಮಾಡ್ತಿಲ್ಲ : ಲೋಕಸಭೆಯಲ್ಲಿ ಕಾಂಗ್ರೆಸ್ ಯಾಕೆ ಗೆಲ್ಲಬೇಕು ಎಂದು ಹೇಳಿದ ಲಕ್ಷ್ಮೀ ಹೆಬ್ಬಾಳ್ಕರ್

ಹೆಬ್ಬಾಳ್ಕರ್
---Advertisement---

 

ಉಡುಪಿ: ರಾಮಮಂದಿರ ಕಟ್ಟಲಿಕ್ಕೇನೆ ದೇಣಿಗೆ ಕೊಟ್ಟಿದ್ದೀನಿ. ವೈಯಕ್ತಿಕವಾಗಿ ನಾನು ದೇವರ ಭಕ್ತೆ. ರಾಮ ಇರಲಿ, ಕೃಷ್ಣ ಇರಲಿ, ಪರಮೇಶ್ವರ ಇರಲಿ. ನಮ್ಮ ಸಂಸ್ಕೃತಿಯನ್ನು ಪಾಲನೆ ಮಾಡ್ತೀನಿ. ಇಷ್ಟು ಮಾತ್ರ ಹೇಳಬಹುದು. ಬೇರೆ ಮಾತನಾಡುವುದಕ್ಕೆ ನಾನು ಪಕ್ಷದ ಅಧ್ಯಕ್ಷೆಯೂ ಅಲ್ಲ, ದೊಡ್ಡ ಸ್ಥಾನದಲ್ಲೂ ಇಲ್ಲ. ವೈಯಕ್ತಿಕವಾಗಿ ನಾನು ದೈವಿ ಭಕ್ತಳು. ರಾಮಮಂದಿರ ಏನು ಅವರದ್ದ..? ಅಥವಾ ನಮ್ಮದಾ..? ರಾಮ ಮಂದಿರ ಇರೋದು ಭಾರತ ದೇಶದಲ್ಲಿ. 140 ಕೋಟಿ ಜನಸಂಖ್ಯೆಯದ್ದು. ಅಯೋಧ್ಯೇಗೆ ಹೋಗೇ ಹೋಗ್ತೀನಿ. ಯಾವಾಗ ಅಂತ ಗೊತ್ತಿಲ್ಲ ಎಂದಿದ್ದಾರೆ.

ಇದೇ ವೇಳೆ ಯತೀಂದ್ರ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಯತೀಂದ್ರ ಸಿದ್ದರಾಮಯ್ಯ ಅವರು ಯಾಕೆ ಆ ರೀತಿ ಹೇಳಿದರು ಎಂಬುದು ಗೊತ್ತಿಲ್ಲ. ಆದರೆ ನಮ್ಮೆಲ್ಲರದ್ದು ಲೋಕಸಭಾ ಚುನಾವಣೆ ಕಡೆಗೆ ಗಮನ ಇರುವುದು. ಚುನಾವಣೆಯಲ್ಲಿ ಅತ್ಯಧಿಕ ಸೀಟುಗಳನ್ನು ಗೆಲ್ಲುವುದಷ್ಟೇ ನಮ್ಮ ಗುರಿ. ಅದನ್ನಷ್ಟೇ ನಾನು ಮಾತನಾಡುವುದಕ್ಕೆ ಇಷ್ಟ ಪಡುತ್ತೀನಿ.

ಬರ ಪರಿಸ್ಥಿತಿ, ಜಿಎಸ್ ಟಿ ವಾಪಾಸ್ ತರುವುದಿರಲಿ ಏನೇ ಸಮಸ್ಯೆ ಬಂದರೂ ಈಗಿರುವ ಸಂಸದರು ಪರಿಹಾರ ತರುವುದಕ್ಕೆ ಯಾರೂ ಕುಇಡ ಪ್ರಯತ್ನ ಮಾಡುತ್ತಿಲ್ಲ. ಹೋಗ್ಲಿ ಈ ಬಾರಿ ಗಣರಾಜ್ಯೋತ್ಸವದಲ್ಲಿ ನಮ್ಮ ಟ್ಯಾಬ್ಲೋ ಕೂಡ ಇಲ್ಲ. ಕರ್ನಾಟಕ ಪ್ರತಿನಿಧಿಸುವ ಟ್ಯಾಬ್ಲೋ. ಆದರೂ ಒಬ್ಬರು ಕೂಡ ಎಲ್ಲೂ ಕಾಣಿಸುತ್ತಿಲ್ಲ. ಹೀಗಾಗಿ ಜನರಿಗೆ ಗೊತ್ತಿದೆ‌. ಏನು ಮಾಡಬೇಕು ಎಂಬುದನ್ನು ಜನ ನಿರ್ಧಾರ ಮಾಡಿದ್ದಾರೆ. ಅತ್ಯಂತ ಹೆಚ್ಚು ಸೀಟುಗಳನ್ನು ಗೆಲ್ಕಬೇಕು ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...