ಮಂಡ್ಯದಲ್ಲಿ ಬಾಣಂತಿ ಸಾವು : ವೈದ್ಯರ ಮೇಲೆ ಪೋಷಕರ ಆರೋಪ..!

suddionenews
1 Min Read

ಮಂಡ್ಯ: ಜಿಲ್ಲೆಯಲ್ಲಿರುವ ಚೇತನ್ ಮೆಟಾರ್ನಟಿ ಆಸ್ಪತ್ರೆ ಮುಂದೆ ಇಂದು ಫೊಷಕರ ಆಕ್ರಂದನ ಕೇಳಿಸುತ್ತಾ ಇತ್ತು. ವೈದ್ಯರ ಮೇಲಿನ ಆಕ್ರೋಶ ಕೇಳಿಸುತ್ತಾ ಇತ್ತು. ಇದಕ್ಕೆಲ್ಲಾ ಕಾರಣ ಬಾಣಂತಿಯ ಸಾವು. 29 ವರ್ಷದ ನೇತ್ರಾವತಿ ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ.

ನೇತ್ರಾವತಿ ಹೆರಿಗೆಗೂ ಮುನ್ನ ಆರಾಮವಾಗಿಯೇ ಇದ್ದರಂತೆ. ಬಳಿಕ ಅನುಮಾನಸ್ಪದವಾಗಿ ಸಾವನ್ನಪ್ಪಿರುವುದು ಪೋಷಕರ ಅನುಮಾನಕ್ಕೆ ಕಾರಣವಾಗಿದೆ. ಹೆರಿಗೆ ಆಗುವ ತನಕ ಚೆನ್ನಾಗಿಯೇ ಇದ್ದ ಮಗಳು, ಹೆರಿಗೆಯ ಬಳಿಕ ಸಾವನ್ನಪ್ಪಿದ್ದಾಳೆ. ಮಗಳ ಸಾವಿಗೆ ವೈದ್ಯರೆ ಕಾರಣ ಎಂದು ಪೋಷಕರು ಆಕ್ರೋಶಗೊಂಡಿದ್ದಾರೆ.

ಡಾ. ದಿನೇಶ್ ವಿರುದ್ಧ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆಯ ಮುಂದೆ ಶವವನ್ನಿಟ್ಟು, ನಮ್ಮ‌ಮಗಳು ಜೀವಂತವಾಗಿ ಬೇಕು, ಶವವಾಗಿ ಬೇಡ ಎಂದು ನೋವು ತೋಡಿಕೊಂಡಿದ್ದಾರೆ. ಹಸುಗೂಸನ್ನು ಬಿಟ್ಟು ನೇತ್ರಾವತಿ ಸಾವನ್ನಪ್ಪಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *