ರಷ್ಯಾ v/s ಉಕ್ರೇನ್ ಯುದ್ಧ : ವೀಸಾ ಇಲ್ಲದೆ ಇದ್ದರು ಬಾರ್ಡರ್ ಗೆ ಬಂದ ವಿದ್ಯಾರ್ಥಿಗಳಿಗೆ ಅನುಮತಿ ಕೊಟ್ಟ ಪೋಲಾಂಡ್ ಸರ್ಕಾರ

ಸದ್ಯ ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಎಷ್ಟು ಬೇಗ ನಮ್ಮ ದೇಶ ತಲುಪುತ್ತೇವೋ ಎಂಬ ಆತಂಕದಲ್ಲಿದ್ದಾರೆ. ಯುದ್ಧದ ತೀವ್ರತೆ ಹೆಚ್ಚಾಗುತ್ತಲೇ ಇದೆ. ನಾಲ್ಕನೇ ದಿನದ ಈ ಯುದ್ದದಿಂದ ಸಾಕಷ್ಟು ಜನರ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ರಷ್ಯಾ ಉಕ್ರೇನ್ ನ ಹಲವು ಪ್ರದೇಶಗಳನ್ನ ವಶಪಡಿಸಿಕೊಂಡಿದೆ. ಈ ಮಧ್ಯೆ ಅಲ್ಲಿರುವ ಭಾರತೀಯರನ್ನ ಕರೆತರುವಲ್ಲಿ ನಿರತವಾಗಿದೆ.

ಆಪರೇಷನ್ ಗಂಗಾ ಯೋಜನೆ ಮೂಲಕ 4ನೇ ವಿಮಾನ ನಿಲ್ದಾಣ ಭಾರತಕ್ಕೆ ಬಂದಿದೆ. 198 ಮಂದಿ ಭಾರತೀಯರನ್ನ ರೋಮಾನಿಯಾದ ಬುಕಾರೆಸ್ಟ್ ನಿಂದ ಏರ್ ಲಿಫ್ಟ್ ಮಾಡಲಾಗಿದೆ. ಯುದ್ಧ ಭೀತಿಯಲ್ಲಿರುವ ವಿದ್ಯಾರ್ಥಿಗಳು ಆದಷ್ಟು ಉಕ್ರೇನ್ ನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಪೋಲಾಂಡ್ ಸರ್ಕಾರ ಹಾಗೇ ಬಂದವರನ್ನ ವೀಸಾ ಕೇಳದೆ ಮಾನವೀಯ ನಿಲುವು ತಾಳಿದೆ.

ಉಕ್ರೇನ್ ನಿಂದ ತಪ್ಪಿಸಿಕೊಂಡು ಬಾರ್ಡರ್ ಗೆ ಬರುತ್ತಿರುವ ವಿದ್ಯಾರ್ಥಿಗಳಿಗೆ ಪೋಲಾಂಡ್ ಸರ್ಕಾರ ವೀಸಾ ಇಲ್ಲದೆ ಇದ್ದರು ಭಾರತೀಯ ವಿದ್ಯಾರ್ಥಿಗಳನ್ನ ದೇಶದ ಒಳಗೆ ಬಿಟ್ಟುಕೊಳ್ಳುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *