ಮುಲ್ಕಿಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಪ್ರಧಾನಿ ಮೋದಿ

suddionenews
1 Min Read

 

ದ.ಕನ್ನಡ: ಬಿಜೆಪಿ ಸಮಾವೇಶ ಮೂಡಬಿದಿರೆ ಕ್ಷೇತ್ರದ ಮುಲ್ಕಿಯಲ್ಲಿ‌ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ತುಳುವಿನಲ್ಲಿಯೇ ಭಾಷಣ ಆರಂಭಿಸಿದ್ದಾರೆ. ಮುಲ್ಕಿ ವೆಂಕಟರಮಣ ಸ್ವಾಮಿಗೆ ನನ್ನ ನಮನ ಎಂದಿದ್ದಾರೆ. ಭಜರಂಗ ಬಲಿಗೆ ಜೈ ಎಂದಿದ್ದಾರೆ.

ಮೋದಿಯವರು ಭಾಷಣ ಆರಂಭಿಸುವಾಗಲೇ ನೆರೆದಿದ್ದ ಜನ ಮೋದಿ ಮೋದಿ ಎಂದು ಕೂಗಿದ್ದಾರೆ. ಸಹೋದರ ಸಹೋದರಿಯರೇ, ಕಳೆದ ವರ್ಷ ನಾರಾಯಣ ಗುರುಗಳ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿತ್ತು. ದೇಶದ 140 ಕೋಟಿ ಜನರೇ ನಮ್ಮ ರಿಮೋಟ್ ಕಂಟ್ರೋಲ್. ಕರ್ನಾಟಕವನ್ನು ದೇಶದ ನಂಬರ್ ರಾಜ್ಯ ಮಾಡುವ ಸಂಕಲ್ಪ ಇದೆ. ಮುಂದಿನ ಬುಧವಾರ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ.

ಕಾಂಗ್ರೆಸ್ ನಾಯಕರು ನಿವೃತ್ತಿ ಹೆಸರಲ್ಲಿ ವೋಟ್ ಕೇಳುತ್ತಿದ್ದಾರೆ. ಬಂಧು ಬಗಿನಿಯರೇ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ತನ್ನಿ. ಮೂಲಕಸೌಕರ್ಯ ಕ್ಷೇತ್ರದಲ್ಲಿ ಸೂಪರ್ ಪವರ್ ಮಾಡುತ್ತೇವೆ. ಬಿಜೆಪಿ ಸರ್ಕಾರ ಜನರ ಪರ ಯೋಜನೆಗಳನ್ನು ತಂದಿದೆ. ಬಿಜೆಪಿಗೆ ಮತ ಹಾಕಬೇಕು, ಅಧಿಕಾರಕ್ಕೆ ತರಬೇಕ ಎಂದು ಮಂಗಳೂರು ಸಮಾವೇಶದಲ್ಲಿ ಪ್ರಧಾನಿ ಮೋದಿ ನುಡಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *