ನನ್ನ ಭಾಷಣ ಕೇಳಿ ಎಂದರೂ ಹೊರಟು ಹೋದ ಸಿದ್ದರಾಮಯ್ಯ, ಹಠ ಬಿಡದೆ ಖಾಲಿ ವೇದಿಕೆಯಲ್ಲೇ ಮಾತು ಮುಗಿಸಿದ ಕಾಂಗ್ರೆಸ್ ಮುಖಂಡ..!

suddionenews
1 Min Read

ಹಾಸನ: ಕಾಂಗ್ರೆಸ್ ಮುಖಂಡರಿಬ್ಬರು ನನ್ನ ಭಾಷಣವನ್ನು ಕೇಳಿಸಿಕೊಳ್ಳಿ ಎಂದು ಎಷ್ಟೇ ಮನವಿ ಮಾಡಿಕೊಂಡರು, ಸಿದ್ದರಾಮಯ್ಯ ಹಾಗೇ ಎದ್ದು ಹೋದ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದ ಶಿಕ್ಷಣ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ನಡೆದಿದೆ.

ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ಕೂಡ ಭಾಗಿಯಾಗಿದ್ದರು. ಅವರ ಭಾಷಣ ಮುಗಿದ ಬಳಿಕ ಅಲ್ಲಿಂದ ಹೊರಟಿದ್ದರು. ಈ ವೇಳೆ ಕಾಂಗ್ರೆಸ್ ಮುಖಂಡರೊಬ್ಬರು ಭಾಷಣ ಮಾಡಲು ಹೋದಾಗ, ವೇದಿಕೆ ಎಲ್ಲಾ ಖಾಲಿಯಾಗುತ್ತಿರುವುದನ್ನು ಗಮನಿಸಿದರು. ಬಳಿಕ ಆ ಮುಖಂಡ ಸಿದ್ದರಾಮಯ್ಯ ಅವರನ್ನು ಕೂಗಿ ಕೂಗಿ ಮನವಿ ಮಾಡಿಕೊಂಡರು. ದಯವಿಟ್ಟು ನೀವೂ ಹೋಗಬೇಡಿ, ನನ್ನ ಭಾಷಣವನ್ನು ಕೇಳಿ ಎಂದರು.

ನೀವೂ ನಿಜವಾದ ಕಾಂಗ್ರೆಸ್ ನಾಯಕರೇ ಆದರೇ ಕುಳಿತುಕೊಳ್ಳಿ ನನ್ನ ಭಾಷಣ ಕೇಳಿ ಎಂದರು. ಆದರೆ ಸಿದ್ದರಾಮಯ್ಯ ಅಲ್ಲಿಂದ ಹೊರಟೆ ಬಿಟ್ಟರು. ಅವರ ಹಿಂದೆಯೇ ವೇದಿಕೆ ಮೇಲಿದ್ದವರೆಲ್ಲಾ ಖಾಲಿಯಾದರು. ಬಳಿ ಖಾಲಿಯಾದ ವೇದಿಕೆಯಲ್ಲೇ ನಿಂತು ಮಾತನಾಡಿದ ಸ್ಥಳೀಯ ಮುಖಂಡ, ಸಿದ್ದರಾಮಯ್ಯ ಅವರು ಇದ್ದಿದ್ದರೆ ಬಿಜೆಪಿ ಹಗರಣಗಳನ್ನು ಬಯಲಿಗೆಳೆಯುತ್ತಿದ್ದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *