ದಯವಿಟ್ಟು ರಾಜ್ಯದ ಶಾಂತಿ ಹಾಳು ಮಾಡಬೇಡಿ: ಕುಮಾರಸ್ವಾಮಿ ಮನವಿ

suddionenews
1 Min Read

ಬೆಂಗಳೂರು: ರಾಜ್ಯದ ಎಲ್ಲಾ ಸಂಘಟನೆಗೂ ಒಂದು ಕಿವಿ ಮಾತು ಹೇಳುತ್ತೇನೆ ದಯವಿಟ್ಟು ರಾಜ್ಯದ ಶಾಂತಿ ಹಾಳು ಮಾಡಬೇಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಇನ್ನು ಮುಸ್ಲಿಂ ಮಹಿಳೆಯರು ಹಿಜಾಬ್ ಸಂಬಂಧ ಹೆಲ್ಮೆಟ್ ಹೇಗೆ ಸೇಫ್ಟಿ ಇರುತ್ತದೋ ಹೊಜಾಬ್ ಕೂಡ ಅಷ್ಟೆ ಸೇಫ್ಟಿ. ಕೆಲವರು ಹೇಗೆ ಹೆಲ್ಮೆಟ್ ಹಾಕುವುದಿಲ್ಲವೋ ಹಿಜಾಬ್ ಕೂಡ ಕೆಲವರು ಹಾಕುವುದಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದರು. ಈ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ಆ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.

ಒಬ್ಬೊಬ್ಬರಿಗೆ ಒಂದೊಂದು ಭಾವನೆ ಇರುತ್ತದೆ. ಅದನ್ನ ಅವರು ವ್ಯಕ್ತಪಡಿಸುತ್ತಾರೆ. ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ. ಮೊದಲು ಮಕ್ಕಳನ್ನು ಶಾಲೆಗೆ ಕಳುಬಿಸುವ ಪೋಷಕರಿಗೆ ತಿಳುವಳಿಕೆ ಹೇಳಬೇಕು. ಸಂಘಟನೆಗಳ ನಾಯಕರು ನೀಡುವ ಹೇಳಿಕೆಗಳಿಂದ ಪ್ರೇರಿತರಾಗಿ ಸಮಾಜದ ಶಾಂತಿಯನ್ನು ಹಾಳು ಮಾಡಬೇಡಿ. ಉಡುಪಿಯಲ್ಲಿ ಆದ ಈ ಘಟನೆ ಇಷ್ಟು ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಇಂಥ ಸಂಘರ್ಷದ ವಾತಾವರಣ ನಿರ್ಮಾಣ ಮಾಡಿದ್ದೆ ತಪ್ಪು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *