ಸುದ್ದಿಒನ್, ಚಿತ್ರದುರ್ಗ : ನಗರದ ಕೋಳಿಬುರುಜನಹಟ್ಟಿ ನಿವಾಸಿ ಎಂ.ಎನ್.ಕಿರಣ್ ಕುಮಾರ್ ಜೈಪುರದ ಜೆಜೆಟಿ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ (ಪಿಎಚ್ ಡಿ) ಪಡೆದಿದ್ದಾರೆ. ಡಾ.ಡ್ಯಾಂಡ್ ಹಿರೇನ್ ಜಯಂತಿ ಲಾಲ್ ಅವರ ಮಾರ್ಗದರ್ಶನದಲ್ಲಿ Quantum Machine Learning Architecture for Dengue Fever Classification Based on Synthetic Data Generation Using Deep Learning Approach ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಪ್ರಬಂಧ ಮಂಡಿಸಿದ್ದಾರೆ.
ನಗರದ ಹಿರಿಯ ವಕೀಲರಾದ ಎಂ.ನಾಗೇಂದ್ರಯ್ಯ ಅವರ ಪುತ್ರರಾಗಿರುವ ಎಂ.ಎನ್. ಕಿರಣ್ ಕುಮಾರ್ ಪ್ರಸ್ತುತ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಕಾರ್ಮಸ್ & ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.




