ಯತ್ನಾಳ್ ಹಾಗೂ ರೇಣುಕಾಚಾರ್ಯಗೆ ಪಕ್ಷದಿಂದ ನೋಟೀಸ್..!

1 Min Read

ಬೆಂಗಳೂರು: ಮಾಜಿ ಶಾಸಕ ರೇಣುಕಾ ಚಾರ್ಯ ನಿನ್ನೆ ಫುಲ್ ರೆಬಲ್ ಆಗಿದ್ರು. ಬಸವರಾಜ್ ಬೊಮ್ಮಾಯಿ, ಅಣ್ಣಾಮಲೈ ಮೇಲೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಕೂಡ ತಮ್ಮ ಪಕ್ಷದ ವಿರುದ್ಧವಾಗಿ ಆಗಾಗ ನಾಲಿಗೆ ಹರಿಬಿಡುತ್ತಾ ಇರುತ್ತಾರೆ. ಹೀಗಾಗಿ ಪಕ್ಷದಿಂದ ಶಿಸ್ತುಕ್ರಮ ಉಲ್ಲಂಘಟನೆ ಮಾಡಿದ್ದಕ್ಕಾಗಿ ಇಬ್ಬರು ನಾಯಕರಿಗೆ ನೋಟೀಸ್ ನೀಡಲಾಗಿದೆ. ರಾಜ್ಯ ಬಿಜೆಪಿ ಶಿಸ್ತು ಸಮಿತಿಯಿಂದ ನೋಟೀಸ್ ಜಾರಿ ಮಾಡಿದ್ದಾರೆ.

ಇಂದು ಬೆಂಗಳೂರಿನ ಕಚೇರಿಗೆ ಬರುವಂತೆ ಸೂಚನೆ ನೀಡಲಾಗಿದೆ. ವಾಗ್ದಾಳಿ ನಡೆಸಿದ್ದಲ್ಲದೆ ಹೊಂದಾಣಿಕೆಯ ರಾಜಕಾರಣದ ಬಗ್ಗೆಯೂ ಆರೋಪ ಮಾಡಿದ್ದರು. ಹೀಗಾಗಿ ಇಬ್ಬರಿಗೂ ನೋಟೀಸ್ ನೀಡಲಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಮೊದಲಿಂದಾನೂ ಪಕ್ಷದೊಳಗಿರುವವರನ್ನೇ ವಿರೋಧ ಮಾಡಿಕೊಂಡು ಬಂದಿದ್ದಾರೆ. ಈ ಬಾರಿಯ ನೋಟೀಸ್ ಗೆ ಯಾವ ರೀತಿಯ ಉತ್ತರ ಕೊಡಲಿದ್ದಾರೆ ಎಂಬುದನ್ನು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *