ಪೇಮೆಂಟ್ ಮಾಡಿ ಸಿಎಂ ಆದವರು ಸಿದ್ದರಾಮಯ್ಯ ಮಾತ್ರ : ಗಂಭೀರ ಆರೋಪ ಮಾಡಿದ ನಳೀನ್ ಕುಮಾರ್ ಕಟೀಲ್

1 Min Read

ವಿಜಯಪುರ: ಕಾಂಗ್ರೆಸ್ ಪಕ್ಷ ಬಿಜೆಪಿ ಪಕ್ಷವನ್ನು ಪೇಸಿಎಂ ಅಭಿಯಾನದ ಮೂಲಕ ಮುಜುಗರಕ್ಕೀಡು ಮಾಡುತ್ತಿದೆ. ಅಭಿಯಾನ ಜೋರಾದ ಬೆನ್ನಲ್ಲೆ ಬಿಜೆಪಿ ನಾಯಕರು ಕಾಂಗ್ರೆಸ್ ನವರ ಮೇಲೆ ಪ್ರಹಾರ ಮಾಡಲು ಆರಂಭಿಸಿದ್ದಾರೆ. ಇದೀಗ ನಳೀನ್ ಕುಮಾರ್ ಕಟೀಲು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ.

ರಾಜ್ಯದಲ್ಲಿ ಯಾರಾದರೂ ಪೇಮೆಂಟ್ ಮಾಡಿ ಮುಖ್ಯಮಂತ್ರಿಯಾಗಿದ್ದಾರೆ ಎಂದರೆ ಅದು ಸಿದ್ದರಾಮಯ್ಯ ಮಾತ್ರ ಎಂದಿದ್ದಾರೆ. ಮೇಡಂ ಸೋನಿಯಾಗಾಂಧಿಗೆ ಪೇಮೆಂಟ್ ಮಾಡಿಯೇ ಸಿದ್ದರಾಮಯ್ಯ ಸಿಎಂ ಸೀಟ್ ಉಳಿಸಿಕೊಂಡಿದ್ದು. ಪೇಮೆಂಟ್ ಮಾಡಿಯೇ ಮೇಡಂ ಅವರನ್ನು ಸಿದ್ದರಾಮಯ್ಯ ಸಂತೋಷ ಪಡಿಸಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆ ಹಾಗೂ ಪರಮೇಶ್ವರ್ ಸೀನಿಯರ್ ಲೀಡರ್ ಆಗಿದ್ದವರು. ಡಿಕೆ ಶಿವಕುಮಾರ್ ಹಾಗೂ ಆರ್ ವಿ ದೇಶಪಾಂಡೆ ಇಂಥಹ ಲೀಡರ್ ನಡುವೆ ಸಿದ್ದರಾಮಯ್ಯ ಅವರು ಪೇಮೆಂಟ್ ಕೊಟ್ಟಿಯೇ ಸಿಎಂ ಆಗಿದ್ದು. ಪೇಸಿಎಂ ಪದದಲ್ಲಿಯೇ ಎರಡು ಅರ್ಥ ಇದೆ. ಒಂದು ಪೇ ಸಿಎಂ ಸಿದ್ದರಾಮಯ್ಯ ಮತ್ತೊಂದು ಪೇ ಕಾಂಗ್ರೆಸ್ ಮೇಡಂ ಎಂಬುದು ಅಂತ ವ್ಯಂಗ್ಯವಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *