Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕೇವಲ ಅರ್ಧ ಗಂಟೆ ಜರ್ನಿ ; ಹೇಗೆ ಅಂತೀರ ಈ ಸ್ಟೋರಿ ಓದಿ

---Advertisement---

 

 

ಬೆಂಗಳೂರಿನಿಂದ ಶಿವಮೊಗ್ಗವನ್ನು ಇನ್ಮುಂದೆ ಅರ್ಧ ಗಂಟೆಯಲ್ಲಿಯೇ ತಲುಪಬಹುದು. ಆಶ್ಚರ್ಯ ಆಗ್ತಾ ಇರ್ಬೇಕು ಅಲ್ವಾ. ಹೇಗೆ ಅನ್ನೋದನ್ನ ಹೇಳ್ತೀವಿ ಕೇಳಿ. ಇದೆಲ್ಲ ಈಗಿನ ತಂತ್ರಜ್ಞಾನದಿಂದ ಸಾಧ್ಯವಾಗಿದೆ. ದೇಶದಲ್ಲಿ ಶೀಘ್ರದಲ್ಲೇ ಹೈಪರ್‌ಲೂಪ್‌ ಕಾರ್ಯಾಚರಣೆ ಶುರು ಮಾಡಲಿದ್ದು, ಭಾರತದ ಸಾರಿಗೆ ವ್ಯವಸ್ಥೆ ಪ್ರಮುಖ ಕ್ರಾಂತಿಗೆ ಸಾಕ್ಷಿಯಾಗಲಿದೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಅವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಆದಷ್ಟು ಬೇಗ ಭಾರತದಲ್ಲಿ ಹೈಪರ್‌ಲೂಪ್‌ನ ಕನಸು ನನಸಾಗಲಿದೆ ಎಂದು ಹೇಳಲಾಗ್ತಿದೆ.

ಹೈಪರ್‌ಲೂಪ್‌ ವ್ಯವಸ್ಥೆ ಬಂದರೆ ಕೇವಲ 30 ನಿಮಿಷಗಳಲ್ಲಿ 350 ಕಿಮೀ ಅಂತರವನ್ನು ಕ್ರಮಿಸಬಹುದಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಅರ್ಧ ಗಂಟೆಯಲ್ಲಿ ಹೋಗಬಹುದು. ಈ ಹೈಪರ್‌ಲೂಪ್‌ ಟೆಸ್ಟ್‌ ಟ್ರ್ಯಾಕ್‌ ಅನ್ನು ಐಐಟಿ ಈಗಾಗಲೇ ಮದ್ರಾಸ್‌ ಕ್ಯಾಂಪಸ್‌ನಲ್ಲಿ ನಿರ್ಮಿಸಲಾಗಿದೆ. ಇದಕ್ಕೆ ರೈಲ್ವೇ ಸಚಿವಾಲಯ ಹಣಕಾಸು ನೆರವನ್ನು ನೀಡಿದೆ. ಇದು ಐದನೇ ಮಾದರಿಯ ಸಾರಿಗೆ ವಿಧಾನವಾಗಿದೆ. ವಾಹನ, ಹಡಗು, ರೈಲು, ವಿಮಾನದ ಬಳಿಕ ಈ ಹೈಪರ್‌ಲೂಪ್‌ ಸಾರಿಗೆ ವಿಧಾನ ಬಂದಿದೆ. ದೀರ್ಘ ಅಂತರವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಕ್ರಮಿಸುವ ಹೈ-ಸ್ಪೀಡ್‌ ಸಾರಿಗೆ ವ್ಯವಸ್ಥೆ ಈ ಹೈಪರ್‌ಲೂಪ್‌ ಆಗಿದೆ.

ಇದು ವ್ಯಾಕ್ಯೂಮ್‌ ಟ್ಯೂಬ್‌ಗಳಲ್ಲಿ ವಿಶೇಷ ಕ್ಯಾಪ್ಸುಲ್‌ಗಳ ಮೂಲಕ ಅತಿ ವೇಗದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಇದು ಹೇಗೆ ಕೆಲಸ ಮಾಡುತ್ತೆ ಅನ್ನೋದನ್ನು ಗಮನಿಸಿದರೆ, ವ್ಯಾಕ್ಯುಮ್‌ ಟ್ಯೂಬ್‌ನಲ್ಲಿ ವಿದ್ಯುತ್ಕಾಂತೀಯವಾಗಿ ತೇಲುವ ಪಾಡ್‌ ಇರುತ್ತದೆ. ಇದರಿಂದ ಘರ್ಷಣೆ ಮತ್ತು ಗಾಳಿಯ ಸೆಳೆತ ನಿವಾರಣೆಯಾಗಿ ಪಾಡ್‌ ಮ್ಯಾಕ್‌ 1.0 ವರೆಗಿನ ವೇಗವನ್ನು ತಲುಪುತ್ತದೆ. 1 ಮ್ಯಾಕ್‌ ಅಂದ್ರೇ ಗಂಟೆಗೆ 1234 ಕಿಮೀ ಎಂದು ಅರ್ಥ. ಇನ್ನು ಈ ಹೈಪರ್ ಲೂಪ್ ಗೆ ಯಾವುದೇ ವಾತಾವರಣ ಇದ್ದರೂ ವ್ಯತ್ಯಾಸವಾಗುವುದಿಲ್ಲ. ಈ ವ್ಯವಸ್ಥೆಯಲ್ಲಿ ಪರಸ್ಪರ ಡಿಕ್ಕಿ ಅನ್ನೋದು ಇಲ್ಲ. ಜೊತೆಗೆ ವಿಮಾನಕ್ಕಿಂತ ಎರಡು ಪಟ್ಟು ವೇಗದಲ್ಲಿ ಹೈಪರ್‌ಲೂಪ್‌ ಪಾಡ್‌ಗಳು ಚಲಿಸುತ್ತವೆ. ಕಡಿಮೆ ವಿದ್ಯುತ್‌ ಬಳಸಿಕೊಂಡು, ಶಕ್ತಿಯನ್ನು ಸಂಗ್ರಹಿಸಿಕೊಳ್ಳುತ್ತದೆ. ಇದರಿಂದ 24 ಗಂಟೆಗಳ ಕಾಲ ಹೈಪರ್‌ಲೂಪ್‌ ಆಪರೇಷನ್‌ ನಡೆಸಬಹುದು. ಭಾರತದಲ್ಲಿ ಹೈಪರ್‌ಲೂಪ್‌ ರೈಲುಗಳ ಪರಿಚಯವಾದರೆ ದೇಶದ ರೈಲ್ವೇ ಹಾಗೂ ರಸ್ತೆ ಪ್ರಯಾಣ ವ್ಯವಸ್ಥೆಯಲ್ಲಿ ಭಾರೀ ಪರಿವರ್ತನೆಯಾಗಲಿದೆ. ಹಾಗೇ ದೂರದ ಜಿಲ್ಲೆಗಳಿಗೆ ಹೋಗುವವರಿಗೆ ಬಾರೀ ಅನುಕೂಲವಾಗಲಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment