Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಸವತತ್ವ ದಿಂದ ಮಾತ್ರ ದೇಶದಲ್ಲಿ ಶಾಂತಿ ನೆಲಸಲು ಸಾಧ್ಯ : ಬಸವ ಪ್ರಭು ಸ್ವಾಮೀಜಿ.

Facebook
Twitter
Telegram
WhatsApp

ಬೆಂಗಳೂರು, (ಮೇ.07) : ಈ ದೇಶದಲ್ಲಿ ಶಾಂತಿ ನೆಲಸಲು ಬಸವತತ್ವ ಪಾಲನೆ ಅನಿವಾರ್ಯ ಎಂದು ದಾವಣಗೆರೆ ವಿರಕ್ತ ಮಲಠದ ಪೂಜ್ಯ ಶ್ರೀ ಬಸವ ಪ್ರಭು ಸ್ವಾಮೀಜಿಗಳು ಹೇಳಿದರು.

ವಿಜಯನಗರದಲ್ಲಿ ಬಸವ ಕೇಂದ್ರ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿ,
ಈಗ ನಡೆಯುತ್ತಿರುವ ಯುದ್ಧಗಳು ಆಯಾ ದೇಶದಲ್ಲಿ ಅಶಾಂತಿ ಉಇಂಟುಮಾಡಿವೆ. ಅದರಿಂದ ದೇಶ ಮತ್ತು ದೇಹಕ್ಕೂ ಹಾನಿಯನ್ನು ನಾವು ನೋಡುತ್ತಿದ್ದೇವೆ. ಮೋಸ ವಂಚನೆಯಿಂದ ಕೋಟಿ ಕೋಟಿ ಹಣ ಸಂಪಾದಿಸುವುದು ಮುಖ್ಯವಲ್ಲ ಕಾಯಕ ನಿಷ್ಠೆಯಿಂದ ದುಡಿದ ಹಣ ಶ್ರೇಷ್ಠವಾದುದು. ಎಲ್ಲರೂ ದಾಸೋಹ ಮನೋಭಾವದಿಂದ ಇಂದು ಸೇವೆ ಮಾಡಿ ಅದೇ ನಿಮಗೆ ದುಪ್ಪಟ್ಟಾಗುತ್ತದೆ ಎಂದರು.

ಖ್ಯಾತ ಗಾಯಕ ಶಶಿಧರ್ ಕೋಟೆ ಮಾತನಾಡಿ ಗುರುಗಳ ಮಾರ್ಗದಲ್ಲಿ ಇಂದು ನಾವೆಲ್ಲ ಹೋದರೆ ಮಾತ್ರ ನಮ್ಮ ನೆಲ ಜಲ ದೇಶ ಉಳಿಸಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ಪ್ರಾಸ್ತಾವಿವಾಗಿ ಮಾತನಾಡಿದ ಬಸವ ಕೇಂದ್ರದ ಅಧ್ಯಕ್ಷರಾದ ಅರುಣ್ ಕುಮಾರ್ ಡಿ. ಟಿ ಮಾತನಾಡಿ ನಾಡಿನಾದ್ಯಂತ  ಬಸವ ಕೇಂದ್ರಗಳ ಕಾರ್ಯಗಳನ್ನು  ವಿವರಿಸಿದರು.

ಈ ಕಾಯ ಬಂದಿರುವಿದೇಕೆ ? ವಿಷಯದ ಬಗ್ಗೆ ಕೃಷ್ಣ ಬಾಯಿ ಉಪನ್ಯಾಸ ನೀಡಿದರು.

ಮಾಗಡಿ ರಸ್ತೆ ಪೊಲೀಸ್ ಸಬ್ ಇನ್ಸಪೆಕ್ಟರ್ ಕು.ಸುಮಂಗಲ, ಬಸವ ತತ್ವದ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋದಲ್ಲಿ ಕ್ರೈಮ್ ಗಳು ಇರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯ ದಾಸೇಗೌಡ ಸೇರಿದಂತೆ ಅನೇಕ ಭಕ್ತಾದಿಗಳು ಭಾಗವಹಿಸಿದ್ದರು.

ದಾಸೋಹ ಮಾಡಿದ ಶಿವಪ್ರಕಾಶ್ ಹಾಗೂ ವಚನಗಯನ ಮಾಡಿದ ಪೇಮ ಶಾಂತವೀರಯ್ಯ ಅವರಿಗೆ ಸನ್ಮಾನಿಸಲಾಯಿತು. ಅಮೃತ್ ದೂಪ್ ನಿರೂಪಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನೇಹಾ ಕೊಲೆ ಪ್ರಕರಣ : ಯಾರನ್ನೂ ರಕ್ಷಿಸುವ ಉದ್ದೇಶವಿಲ್ಲದೆ ಇದ್ದರೆ ಸಿಬಿಐಗೆ ವಹಿಸಲಿ ಎಂದ ಬಸವರಾಜ್ ಬೊಮ್ಮಾಯಿ

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷಗಟು ಹೋರಾಟಗಳು ನಡೆದಿವೆ. ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು, ನೇಹಾ ಸಾವಿಗೆ ನ್ಯಾಯ ಸಿಗಬೇಕು ಎಂಬ ಒತ್ತಾಯಗಳು ಕೇಳಿವೆ. ಇದೀಗ ಮಾಜಿ ಸಿಎಂ

ಚಿತ್ರದುರ್ಗ ಸೇರಿದಂತೆ 11 ಜಿಲ್ಲೆಗಳಲ್ಲಿ 3 ದಿನಗಳ ಕಾಲ ಮಳೆ

ಬೆಂಗಳೂರು: ಬಿರು ಬೇಸಿಗೆಯಿಂದ ಬೇಯುತ್ತಿದ್ದ ಜನರಿಗೆ ವರುಣರಾಯ ಹಂಗ್ ಬಂದು ಹಿಂಗ್ ತಂಪೆರೆದು ಹೋಗಿದ್ದ. ಇನ್ನು ಮಳೆಯಾಗಲಿದೆ ಎಂದುಕೊಳ್ಳುವಾಗಲೇ ಒಣ ಹವೆ ಜಾಸ್ತಿಯಾಗಿತ್ತು. ಉಷ್ಣಾಂಶ ದಿನೇ ದಿನೇ ಏರಿಕೆಯಾಗುತ್ತಲೆ ಇತ್ತು. ಇದೀಗ ಮತ್ತೆ ಮಳೆಯಾಗುವ

ಚಿತ್ರದುರ್ಗ ಅಭ್ಯರ್ಥಿ ಗೋವಿಂದ ಕಾರಜೋಳ ಅವರೇ ಇಂದು ಮತ ಚಲಾಯಿಸಿಲ್ಲ : ಕಾರಣವೇನು ಗೊತ್ತಾ..?

ಚಿತ್ರದುರ್ಗ: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ಮೇ 7 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಮತದಾರರೆಲ್ಲಾ ಬಹಳ ಉತ್ಸುಕತೆಯಿಂದ ಮತದಾನ ಮಾಡುತ್ತಿದ್ದಾರೆ. ಆದರೆ ಕೆಲ ಅಭ್ಯರ್ಥಿಗಳು ತಮ್ಮ ಮತವನ್ನು ತಾವೇ

error: Content is protected !!