Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಜಾಟಾಕೀಸ್ ನಲ್ಲಿ ಒನ್ ಅಂಡ್ ಒನ್ಲಿ ವರಲಕ್ಷ್ಮೀಯ ಖ್ಯಾತಿ : ರಾಣಿ ಪಾತ್ರದ ಶ್ವೇತಾ ಹೇಳಿದ್ದೇನು..?

Facebook
Twitter
Telegram
WhatsApp

 

ಬೆಂಗಳೂರು: ಸುಮಧುರವಾದ ಧ್ವನಿ ಹೊಂದಿದ್ದ ಅಪರ್ಣಾ ಇನ್ನಿಲ್ಲ. ಅವರಿಲ್ಲದ ನೋವು ಕನ್ನಡಿಗರನ್ನೇ ಬಾಧಿಸಿದೆ. ಅಪರ್ಣಾ ಹೆಚ್ಚು ಖ್ಯಾತಿ ಪಡೆದಿದ್ದು ಒಂದು ತಮ್ಮ ಸ್ವಚ್ಚವಾದ ಕನ್ನಡದಿಂದ,  ಮತ್ತೊಂದು ಒನ್ ಅಂಡ್ ಒನ್ಲಿ ವರಲಕ್ಷ್ಮೀ ಪಾತ್ರವನ್ನು ಯಾರೂ ಕೂಡ ಮರೆಯಲು ಸಾಧ್ಯವಿಲ್ಲ. ಇದೇ ರಿಯಾಲಿಟಿ ಶೋನಲ್ಲಿ ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಕೂಡ ಕಾಣಿಸಿಕೊಂಡಿದ್ದರು. ಅಪರ್ಣಾ ಅವರ ತಂಗಿ ಪಾತ್ರದಲ್ಲಿ. ಈಗ ಅವರಿನ್ನು ಇಲ್ಲ ಎಂದು ಕೇಳಿ ಭಾವುಕರಾಗಿದ್ದಾರೆ. ಅಂದಿನ ದಿನಗಳನ್ನು ನೆನೆದಿದ್ದಾರೆ.

ಆ ದಿನಗಳು ತುಂಬಾ ನಗು ಇರ್ತಾ ಇತ್ತು. ಅದರ ರಿಹರ್ಸಲ್‌ಗೆಲ್ಲಾ ಹೋದಾಗ ಖುಷಿಯಾಗಿರ್ತಾ ಇತ್ತು. ಅಪರ್ಣಾ ಕೂಡ ಖೂಷಿಯಾಗಿಯೇ ಇರುತ್ತಾ ಇದ್ದರು. ವೈಯಕ್ತಿಕ ವಿಚಾರಗಳನ್ನು ಕೂಡ ಹಂಚಿಕೊಳ್ಳುವಷ್ಟು ಬಾಂಧವ್ಯ ನಮ್ಮ ಜೊತೆ ಇತ್ತು. ಅಕ್ಕ ತಂಗಿಯರಂತೆ ಇದ್ದೆವು. ಅವರಿಗೆ ಪ್ರೊಫೆಷನಲ್ ಅಂತ ಬಂದರೆ ಹೆವಿ ಎನರ್ಜಿ. ಹೆಚ್ಚೆಚ್ಚು ಪಾತ್ರಗಳನ್ನು ಮಾಡಬೇಕು ಎಂಬುದು ಅವರಿಗಿತ್ತು. ನೋವಿಟ್ಟುಕೊಂಡು ಕೆಲಸ ಮಾಡಿದ್ದಾರೆ. ಈ ರೀತಿ ಅಪರ್ಣಾ ಅವರನ್ನು ನೋಡುತ್ತೀವಿ ಅಂದುಕೊಂಡಿರಲಿಲ್ಲ. ನಾವೂ ನೋಡಿದ ಅಪರ್ಣಾ ಬೇರೆ. ಮಗುವಿನಂತೆ ಇರ್ತಾ ಇದ್ರು, ತಿಂತಾ ಇದ್ರು. ಕನ್ನಡದ ಬಗ್ಗೆ ಮಾತಾಡ್ತಾ ಇದ್ರು. ಅಪರ್ಣಾರನ್ನ ನಿಜಕ್ಕೂ ಮಿಸ್ ಮಾಡಿಕೊಳ್ಳುತ್ತಾ ಇದ್ದೀವಿ. ವರಲಕ್ಷ್ಮೀ ಮತ್ತು ರಾಣಿ ಪಾತ್ರವನ್ನು ಮಾಡಿದಾಗ ಸಾಕಷ್ಟು ನೆಗೆಟಿವ್ ಕಮೆಂಟ್‌ಗಳು ಬರ್ತಾ ಇತ್ತು. ಅದನ್ನು ನಾವೂ ಚರ್ಚೆ ಮಾಡ್ತಾ ಇದ್ವಿ. ಆದರೂ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು ಒನ್ ಅಂಡ್ ಒನ್ಲಿ ವರಲಕ್ಷ್ಮೀ ಆದರೆ ಈ ಸ್ಥಿತಿಯಲ್ಲಿ, ಮಲಗಿದ್ದಲ್ಲೇ ಮಲಗಿರುವುದನ್ನು ನೋಡುವುದಕ್ಕೆ ನಮ್ಮಿಂದ ನೋಡುವುದಕ್ಕೆ ಆಗುತ್ತಿಲ್ಲ’ ಎಂದಿದ್ದಾರೆ.

ಇಂದು ಅಪರ್ಣಾ ಅವರ ಬನಶಂಕರಿ ನಿವಾಸದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಚಿತ್ರರಂಗದ ಗಣ್ಯರೆಲ್ಲಾ ಭಾಗಿಯಾಗಿದ್ದು, ಪಾರ್ಥಿವ ಶರೀರದ ದರ್ಶನ ಪಡೆಯುತ್ತಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ

ಈ ರಾಶಿಯವರ ಇನ್ಮುಂದೆ ಆರ್ಥಿಕ ಬಲ ಪವರ್ ಫುಲ್. ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ, ಗುರುವಾರ-ರಾಶಿ ಭವಿಷ್ಯ ಸೆಪ್ಟೆಂಬರ್-19,2024 ಸೂರ್ಯೋದಯ: 06:08, ಸೂರ್ಯಾಸ್ತ : 06:11 ಶಾಲಿವಾಹನ ಶಕೆ :1946,

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಹಾಗೂ ಶೋಭಾಯಾತ್ರೆ : 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ

ಚಿತ್ರದುರ್ಗ.ಸೆ.18: ಸೆ.28 ರಂದು ನಗರದಲ್ಲಿ ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯನ್ನು ಶಾಂತಿ ಹಾಗೂ ಸೌಹಾರ್ಧತೆಯಿಂದ ನಡೆಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನಾ ಸಮಿತಿ ಸದಸ್ಯರಗೆ ಸೂಚನೆ

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ : ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನೇಮಕ : ರಂಜಿತ್ ಕುಮಾರ ಬಂಡಾರು

ಸೆಪ್ಟೆಂಬರ್‌ 28 ರಂದು ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯ ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ತಿಳಿಸಿದರು.

error: Content is protected !!