ಒಮಿಕ್ರಾನ್ ಅಷ್ಟೇನು ಅಪಾಯಕಾರಿಯಲ್ಲ : ಸಿಎಂ ಬೊಮ್ಮಾಯಿ

0 Min Read

ಬೆಂಗಳೂರು: ಒಮಿಕ್ರಾನ್ ಭಾರತಕ್ಕೆ ಕಾಲಿಟ್ಟಿಲ್ಲ ಎಂದು ನಿಟ್ಟುಸಿರು ಬಿಡುವಾಗ್ಲೇ ಇಬ್ಬರಲ್ಲಿ ವೈರಸ್ ಪತ್ತೆಯಾಗಿ ಆತಂಕ ಮೂಡಿಸಿದೆ. ಬೆಂಗಳೂರಿನಲ್ಲಿ ಈ ಸೋಂಕಿತರು ಪತ್ತೆಯಾಗಿದ್ದು, ಮುಂಜಾಗ್ರತ ಕ್ರಮಕ್ಕೆ ಸರ್ಕಾರ ಸೂಚಿಸಲಾಗಿದೆ.

ಇನ್ನು ಈ ಬೆನ್ನಲ್ಲೆ ಮಾತನಾಡಿರುವ ಸಿಎಮನ ಬಸವರಾಜ್ ಬೊಮ್ಮಾಯಿ, ಒಮಿಕ್ರಾನ್ ಪತ್ತೆಯಾಗಿರುವ ಕಾರಣ ಯಾರು ಆತಂಕ ಪಡಬೇಕಾಗಿಲ್ಲ ಎಂದಿದ್ದಾರೆ. ತಜ್ಞರ ಜೊತೆ ಚರ್ಚಿಸಿದ್ದು, ಒಮಿಕ್ರಾನ್ ಅಷ್ಟೇನು ಅಪಾಯಕಾರಿಯಲ್ಲ ಎಂದಿದ್ದಾರೆ.

ಇನ್ನು ಈಗಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ಸರ್ಕಾರದಿಂದ ತೆಗೆದುಕೊಳ್ಳಲಾಗುತ್ತಿದೆ. ಅಗತ್ಯ ಬಿದ್ದರೆ ನಾರ್ಗಸೂಚಿಗಳನ್ನ ಬದಲಾಯಿಸಲಾಗುತ್ತದೆ. ಒಮಿಕ್ರಾನ್ ಚಿಕಿತ್ಸೆಗೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಯಾರು ಭಯಪಡುವ ಅಗತ್ತವಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಧೈರ್ಯ ತುಂಬಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *