ಯಾರಿಗೂ ಗುಲಾಮರಾಗುವ ಅವಶ್ಯಕತೆ ಇಲ್ಲ : ಶಾಸಕನಿಗೆ ಸಿಎಂ ಕ್ಲಾಸ್

1 Min Read

 

 

ಬೆಂಗಳೂರು: SC/ST ಮೀಸಲಾತಿ ಹೆಚ್ಚಳಕ್ಕೆ ಅಧಿಕೃತ ಅನುಮೋಧನೆ ಸಿಕ್ಕ ಬಳಿಕ ಸುರಪುರ ಶಾಸಕ ರಾಜೂಗೌಡ ಸಿಎಂ ಬೊಮ್ಮಾಯಿ ಅವರಿಗೆ ಧನ್ಯವಾದ ಹೇಳಿದರು. ಇದೇ ವೇಳೆ ಮಾತು ಮುಂದುವರೆಸಿ ನಾವೂ ನಿಮ್ಮ ಗುಲಾಮರಾಗಿರುತ್ತೇವೆ ಎಂದಿದ್ದರು. ಈ ಮಾತಿಗೆ ಸಿಎಂ ಬೊಮ್ಮಾಯಿ ಅದೇ ವೇದಿಕೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಯಾರಿಗೂ ಯಾರು ಗುಲಾಮರಾಗುವ ಅವಶ್ಯಕತೆ ಇಲ್ಲ. ಗುಲಾಮನಾಗಲೇಬೇಕಾದರೆ ನಿನಗೆ ಬದುಕು ಕೊಟ್ಟ ದೇವರಿಗೆ ಗುಲಾಮನಾಗು. ಭೂಮಿ ಮೇಲಿರುವಂತ ದೇವರಿಗೆ ಗುಲಾಮನಾಗುದು ಬೇಡ ಎಂದಿದ್ದಾರೆ.

ಬಹಳ ಜನ ನಿಮ್ಮನ್ನು ಯಾಮಾರಿಸುವ ಕೆಲಸ ಮಾಡುತ್ತಾರೆ. ನೀವೂ ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೆ, ಸ್ವಾಭಿಮಾನದಿಂದ ಬದುಕಬೇಕು ಎಂದಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಸರ್ವಪಕ್ಷ ಸಭೆ ಹಾಗೂ ಸಂಪುಟ ಸಭೆ ಅಸ್ತು ಎಂದಿದೆ.ಎಸ್ಸಿ ಸಮುದಾಯಕ್ಕೆ 15ರಿಂದ 17ಕ್ಕೆ, ಎಸ್ಟಿ ಸಮುದಾಯಕ್ಕೆ 3ರಿಂದ 7ಕ್ಕೆ ಏರಿಕೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *