Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪೋಷಕರು ತಮ್ಮ ಮಕ್ಕಳು ಕ್ರೀಡಾಪಟುವಾಗಲಿ ಎಂದು ಯಾರೂ ಆಶಿಸುವುದಿಲ್ಲ, ಇದು ದುರಂತ : ಎನ್.ಡಿ. ಕುಮಾರ್

Facebook
Twitter
Telegram
WhatsApp

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಆ.10 :  ಇಂದಿನ ದಿನಮಾನದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಐ.ಟಿ., ಬಿ.ಟಿ. ಇಂಜಿನಿಯರ್, ಡಾಕ್ಟರ್ ನ್ಯಾಯಾವಾದಿ, ಸೇರಿದಂತೆ ಇತರೆ ಉದ್ಯೋಗದಲ್ಲಿ ನೋಡಲು ಇಚ್ಚೆ ಪಡುತ್ತಾರೆ ಹೊರೆತು ಯಾರು ಸಹಾ ತಮ್ಮ ಮಕ್ಕಳು ಕ್ರೀಡಾಪಟುವಾಗಲಿ ಎಂದು ಆಶಿಸುವುದಿಲ್ಲ. ಇದು ನಮ್ಮ ದುರಂತ ಇದರಿಂದ ಭಾರತ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಹಿಂದೆ ಉಳಿಯಲು ಕಾರಣವಾದ ಪ್ರಮುಖ ಅಂಶಗಳಲ್ಲಿ ಇದು ಕೂಡ ಒಂದು. ಎಂದು ಅಂತರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಟು ಎನ್.ಡಿ. ಕುಮಾರ್ ತಿಳಿಸಿದ್ದಾರೆ.

ದಾವಣಗೆರೆ ವಿಶ್ವ ವಿದ್ಯಾಲಯದ ಅಡಿಯಲ್ಲಿ ಜಿ.ಆರ್.ಹಳ್ಳಿಯಲ್ಲಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ  ಶನಿವಾರ ಜಿಮ್‍ಖಾನ ಅಡಿಯಲ್ಲಿ ನಡೆದ ಜ್ಞಾನ ಗಂಗೋತ್ರಿ ಕ್ರೀಡಾಕೂಟ ಅಂತರ ವಿಭಾಗ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮಲ್ಲಿ ಇತ್ತೀಚೆಗೆ ನಡೆದ ಒಲಂಪಿಕ್ ಕ್ರೀಡಾಕೂಟದಲ್ಲಿ ನಮ್ಮವರ ಸಾಧನೆ ಕಡಿಮೆಯಾಗಿದೆ ಇಂದು ಒಂದು ಕಡೆಯಾದರೆ ಮ್ತತೊಂದು ಕಡೆಯಲ್ಲಿ ನಮ್ಮವರಿಗೆ ಕ್ರೀಡೆಯಲ್ಲಿ ಸಿಗಬೇಕಾದ ಸೌಲಭ್ಯ ಸರಿಯಾದಚ ರೀತಿಯಲ್ಲಿ ಸಹಾಯ ಮತ್ತು ಸಹಕಾರ ಸಿಗುತ್ತಿಲ್ಲ, ನಮ್ಮವರು ಒಲಂಪಿಕ್ ನಲ್ಲಿ ಇಷ್ಟು ಪದಕಗಳನ್ನು ಗೆದ್ದಿರುವುದೇ ಒಮದು ದೊಡ್ಡವ ಸಾಧನೆಯಾಗಿದೆ ಎಂದರು.

ಇತ್ತೀಚಿನ ದಿನಮಾನದಲ್ಲಿ ಬಹುತೇಕ ಪೋಷಕರು ತಮ್ಮ ಮಕ್ಕಳು ಉತ್ತಮವಾದ ಅಂಕಗಳನ್ನು ಪಡೆದು ಇಂಜಿನಿಯರ್, ಡಾಕ್ಟರ್, ನ್ಯಾಯವಾದಿ, ಇಲ್ಲವೆ ಸರ್ಕಾರದಲ್ಲಿ ಉತ್ತಮವಾದ ಅಧಿಕಾರಿಯಾಗಲಿ ಎದು ಆಶಿಸುತ್ತಾ ಉತ್ತಮವಾದ ಸಂಬಳವನ್ನು ತರಲಿ ಎನ್ನುತ್ತಾರೆ ಆದರೆ ಯಾರೂ ಸಹಾ ಕ್ರೀಡಾಪಟುಗಳಾಲಿ ಎಂದು ಆಶಿಸುವುದಿಲ್ಲ ಇದು ನಮ್ಮ ದೇಶದ ದುರಂತವಾಗಿದೆ. ಸರ್ಕಾರದಿಂದ ಕ್ರೀಡೆಗೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ಸಿಗುತ್ತಿಲ್ಲ, ಇದರಿಂದ ಹಲವಾರು ಕ್ರೀಡಾಪಟುಗಳು ಉತ್ತಮವಾಧ ಪ್ರತಿಭೆಯನ್ನು ಹೊಂದಿದ್ದರು ಸಹಾ ಅದಕ್ಕೆ ಪ್ರೋತ್ಸಾಹ ಇಲ್ಲದೆ ಕಮರಿ ಹೋಗುತ್ತಿವೆ. ಎಂದು ಕುಮಾರ್ ವಿಷಾಧಿಸಿದರು.

ಕ್ರೀಡಾ ಸಂಯೋಜಕರಾದ ಡಾ. ರಾಜೇಂದ್ರ ಪ್ರಸಾದ್ ಮಾತನಾಡಿ ಇತ್ತೀಚಿನ ದಿನಮಾನದಲ್ಲಿ ಯುವ ಜನತೆ ಕ್ರೀಡೆಯಲ್ಲಿ ಭಾಗವಹಿಸುವುದು ಕಡಿಮೆಯಾಗಿದೆ. ಬಹುತೇಕ ಯುವ ಜನಾಂಗ ಮೋಬೈಲ್‍ನಲ್ಲಿ ಮುಳುಗಿರುತ್ತಾರೆ ಇದರಿಂದ ಪ್ರಪಂಚವನ್ನೇ ಮರೆಯುತ್ತಾರೆ. ಕ್ರಿಡೆ ಮಾನವನಿಗೆ ಅತಿ ಮುಖ್ಯವಾಗಿದೆ ಇದರಿಂದ ಮಾನಸಿಕವಾಗಿ ಸದೃಢವಾಗಲು ಸಹಾಯವಾಗುತ್ತದೆ, ಆದರೆ ಇದರ ಬಗ್ಗೆ ಯಾರಿಗೂ ಸಹಾ ಅರಿವಿಲ್ಲದೆ ಕ್ರೀಡೆಯನ್ನು ನಿರ್ಲಕ್ಷ ಮಾಡುತ್ತಿದ್ದಾರೆ. ಸರ್ಕಾರ ಕ್ರೀಡೆಗಾಗಿ ಸಹಾಯವನ್ನು ಮಾಡುತ್ತಿದೆ ಇದರ ಪ್ರಯೋಜನವನ್ನು ಪಡೆಯಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ.ವಿಜಯ್‍ಕುಮಾರ್, ಡಾ. ಸತೀಶ್,ಡಾ. ಸುಂದರಂ,ಡಾ.ಶಶಿಧರ್,ಡಾ.ಅರುಣ್ ಕುಮಾರ್, ಡಾ.ಗಿರೀಶ್, ಡಾ.ಕುಮಾರ್, ಡಾ. ಕೀರ್ತಿ ಕುಮಾರ್  ಡಾ.ಜೋಶಿ, ಸೂಪರ್ಡೆಂಟ್ ಗಿರಿಜಮ್ಮ ನಿವೇದಿತಾ, ಹಾಗೂ ಬೋಧನಾ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ

ಈ ರಾಶಿಯವರ ಇನ್ಮುಂದೆ ಆರ್ಥಿಕ ಬಲ ಪವರ್ ಫುಲ್. ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ, ಗುರುವಾರ-ರಾಶಿ ಭವಿಷ್ಯ ಸೆಪ್ಟೆಂಬರ್-19,2024 ಸೂರ್ಯೋದಯ: 06:08, ಸೂರ್ಯಾಸ್ತ : 06:11 ಶಾಲಿವಾಹನ ಶಕೆ :1946,

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಹಾಗೂ ಶೋಭಾಯಾತ್ರೆ : 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ

ಚಿತ್ರದುರ್ಗ.ಸೆ.18: ಸೆ.28 ರಂದು ನಗರದಲ್ಲಿ ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯನ್ನು ಶಾಂತಿ ಹಾಗೂ ಸೌಹಾರ್ಧತೆಯಿಂದ ನಡೆಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನಾ ಸಮಿತಿ ಸದಸ್ಯರಗೆ ಸೂಚನೆ

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ : ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನೇಮಕ : ರಂಜಿತ್ ಕುಮಾರ ಬಂಡಾರು

ಸೆಪ್ಟೆಂಬರ್‌ 28 ರಂದು ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯ ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ತಿಳಿಸಿದರು.

error: Content is protected !!