ಲಾಂಗು – ಮಚ್ಚು ಹಿಡಿಯುವ ಬಗ್ಗೆ ಶಪಥ ಮಾಡಿದ ನಿಖಿಲ್ ಕುಮಾರಸ್ವಾಮಿ..!

suddionenews
1 Min Read

ಚಾಮರಾಜನಗರ: 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು, ಕುಮಾರಸ್ವಾಮಿ ಅವರನ್ನು ಮತ್ತೆ ಸಿಎಂ ಮಾಡಬೇಕು ಎಂಬುದು ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಕುಟುಂಬಸ್ಥರ ಅಸೆಯಾಗಿದೆ. ಅದಕ್ಕೆಂದೆ ಸಾಕಷ್ಟು ಶ್ರಮವಹಿಸಿ ಪ್ರಚಾರ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಹೊಸದಾಗಿ ಜೆಡಿಎಸ್ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ನಿಖಿಲ್, ಸಿನಿಮಾ ಬಗ್ಗೆಯೂ ಮಾತನಾಡಿದ್ದಾರೆ.

“ಸಿನಿಮಾ ನನಗೆ ಪ್ಯಾಷನ್. ಚಿತ್ರರಂಗ ಶೋಕಿಯ ಕ್ಷೇತ್ರವಲ್ಲ. ಒಂದು ಸಿನಿಮಾ ಮಾಡಬೇಕು ಅಂದ್ರೆ ಬಹಳಷ್ಟು ಶ್ರಮವಿರುತ್ತದೆ. ನಾನು ಇದುವರೆಗೂ ನಟಿಸಿದ್ದ ಸಿನಿಮಾಗಳಲ್ಲಿ ಲಾಂಗು – ಮಚ್ಚು ಹಿಡಿದಿಲ್ಲ. ಮುಂದೆಯೂ ಹಿಡಿಯುವುದಿಲ್ಲ. ರಾಜ್‍ಕುಮಾರ್, ವಿಷ್ಣು ದಾದಾ ಅವರು ನಮಗೆ ಆದರ್ಶವಾಗಿದ್ದಾರೆ. ನನ್ನನ್ನು ಬಹಳ ಜನ ಸಿನಿಮಾದಿಂದಾನೇ ಗುರುತಿಸುತ್ತಾರೆ. ಆದರೆ ಬಹಳ ಜನ ಸಿನಿಮಾದ ಬಗ್ಗೆ ತಪ್ಪು ಭಾವನೆ ಹೊಂದಿದ್ದಾರೆ.

ಒಂದು ಸಿನಿಮಾದ ಹಿಂದೆ 200 ಕ್ಕೂ ಹೆಚ್ಚು ಜನರ ಶ್ರಮವಿರುತ್ತದೆ. ನನಗೆ ಸಿನಿಮಾ ಕನಸು ಬಂದಿದ್ದೆ ಕುಮಾರಸ್ವಾಮಿ ಅವರಿಂದ‌. ನಮ್ಮ ತಂದೆ ರಾಜಕಾರಣಕ್ಕೆ ಬರುವುದಕ್ಕೂ ಮುನ್ನ ಸಿನಿಮಾ ವಿತರಕರಾಗಿದ್ದರು. ಬಾಲ್ಯದಿಂದ ಅವರನ್ನು ನಾನು ನೋಡುತ್ತಾ ಬಂದ ಕಾರಣದಿಂದಾನೇ ನಾನು ಸಿನಿಮಾಗೆ ಬರಲು ಆಸಕ್ತಿ ಮೂಡಿತು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *