ಚಾಮರಾಜನಗರ: ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯವನ್ನ ಗಟ್ಟಿ ಮಾಡಬೇಕು ಅನ್ನೋದು ಇಡೀ ಕುಟುಂಬಸ್ಥರ ಆಸೆ ಕೂಡ. ಆದರೆ ಅದ್ಯಾಕೋ ಜನರು ಕೈ ಹಿಡಿತಿಲ್ಲ ಎಂಬ ಬೇಸರವೂ ಕುಟುಂಬಸ್ಥರಿಗೆ ಇದೆ. ಸದ್ಯಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ಕೂಡ ರಾಜಕೀಯದಲ್ಲಿ ಆಕ್ಟೀವ್ ಆಗಿದ್ದಾರೆ. ಪಕ್ಷ ಸಂಘಟನೆ ಮಾಡುವುದಕ್ಕೆ ಸಾಕಷ್ಟು ಓಡಾಟ ಮಾಡ್ತಾ ಇದ್ದಾರೆ. ಇದೀಗ ಮುಂದಿನ ದಿನಗಳಲ್ಲಿ ರಾಮನಗರದಿಂದಾನೇ ಸ್ಪರ್ಧೆ ಮಾಡ್ತಾರೆ ಎಂಬ ಮಾತಿದೆ. ಇದಕ್ಕೆ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಬಾರಿ ಜನ ಏನು ತಪ್ಪು ನಿರ್ಧಾರ ಮಾಡಿದ್ದರು, ಈಗ ರಾಮನಗರ ಜನತೆಗೆ ಅದರ ಮನವರಿಕೆಯಾಗುತ್ತದೆ. ಹೀಗಾಗಿ ರಾಮನಗರ ಸೇರಿದಂತೆ ಸುತ್ತಮುತ್ತ ಕ್ಷೇತ್ರಗಳಿಗೆ ಉತ್ತಮವಾದ ಅಭ್ಯರ್ಥಿಗಳನ್ನ ನಿಲ್ಲಿಸುವುದಕ್ಕೆ ನಮ್ಮ ಪಕ್ಷ ಯೋಚನೆ ಮಾಡುತ್ತದೆ. ಮುಂದಿನ ಚುನಾವಣೆಯಲ್ಲಿ ಮೈತ್ರಿ ಸರ್ಕಾರಕ್ಕೆ ಜನತೆಯ ಆಶೀರ್ವಾದ ಇದೆ ಅನ್ನೋದು ನನ್ನ ಅಭಿಪ್ರಾಯ ಎಂದಿದ್ದಾರೆ.
ಇದೆ ವೇಳೆ ಮನರೇಗಾ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರ ಒಂದಷ್ಟು ವಿಚಾರಗಳನ್ನ ಗಮನದಲ್ಲಿಟ್ಟುಕೊಂಡು ಆ ನಿರ್ಧಾರವನ್ನ ತೆಗೆದುಕೊಂಡಿದೆ. ಲೋಪದೋಷಗಳು ಇದ್ದಿದ್ದರಿಂದ ಕೆಲವೊಂದು ಬದಲಾವಣೆ ಮಾಡಿದ್ದಾರೆ. ಮನರೇಗಾ ಯೋಜನೆಯ ವಿಚಾರಕ್ಕೆ ಕಾಂಗ್ರೆಸ್ ನವರು ಅಪಪ್ರಚಾರ ಮಾಡುತ್ತಿದ್ದಾರೆ. ಅದನ್ನ ಯಾರೂ ನಂಬುವುದು ಬೇಡ ಎಂಬ ಮಾತನ್ನ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.
ಇದರ ನಡುವೆ ನಿಖಿಲ್ ಕುಮಾರಸ್ವಾಮಿ ಅವರು ರಾಮನಗರದಿಂದಾನೇ ಸ್ಪರ್ಧೆ ಮಾಡ್ತಾರಾ ಎಂಬುದಕ್ಕೆ ಇನ್ನು ಕ್ಲಾರಿಟಿ ಕೊಟ್ಟಿಲ್ಲ. ಆ ಭಾಗದಿಂದಾನೇ ನಿಲ್ಲಲುಬಹುದು. ಯಾಕಂದ್ರೆ ಅವರ ತಾಯಿ ಕೂಡ ಆ ಭಾಗದಿಂದಾನೇ ಶಾಸಕಿಯಾಗಿದ್ದವರು. ಈ ಬಗ್ಗೆ ಎಲ್ಲರಿಗೂ ಕುತೂಹಲವೂ ಇದೆ.






