Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಂದ್ರಯಾನ ಆಯ್ತು,  ಸೂರ್ಯಯಾನ ಆಯ್ತು ಈಗ  ಸಮುದ್ರಯಾನಕ್ಕೆ ಸಿದ್ದತೆ : ಇಲ್ಲಿದೆ ಡೀಟೇಲ್ಸ್..!

---Advertisement---

 

ಇತ್ತಿಚೆಗಷ್ಟೇ ನಮ್ಮ ಇಸ್ರೋ ಸಂಸ್ಥೆ ಇಡೀ ದೇಶವೇ ನಮ್ಮತ್ತ ತಿರುಗಿ ನೋಡುವಂತ ಸಾಧನೆ ಮಾಡಿ ತೋರಿಸಿದೆ. ಚಂದ್ರಯಾನ 3 ಸಕ್ಸಸ್ ಖುಷಿಯಲ್ಲಿದೆ. ಇದರ ನಡುವೆ ಸೂರ್ಯಯಾನಕ್ಕೂ ಮುನ್ನುಡಿ ಬರೆದಾಗಿದೆ. ಈಗ ಏನಿದ್ದರು, ಸಮುದ್ರಯಾನಕ್ಕೆ ಸಿದ್ಧತೆ ನಡೆಯುತ್ತಿದೆ. ಅದರಲ್ಲೂ ಈ ಯೋಜನೆಯಲ್ಲಿ ಮಾನವರೇ ಸಮುದ್ರಕ್ಕೆ ಇಳಿಯುತ್ತಾರೆ. ಸಬ್ ಮರ್ಸಿಬಲ್ ಮತ್ಸ್ಯ-6000 ಎಂಬ ಹೆಸರಿನಲ್ಲಿ ಸಮುದ್ರಯಾನ ಆರಂಭವಾಗಲಿದೆ.

ಮುಂದಿನ ವರ್ಷ ಈ ಯೋಜನೆಗೆ ಚಾಲನೆ ಸಿಗಲಿದೆ. ಮೂರು ಜನರನ್ನು ನೀರಿನ ಆಳಕ್ಕೆ ಕಳುಹಿಸಲಾಗುತ್ತದೆ. ಚೆನ್ನೈನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿಯಲ್ಲಿ ಲಾಂಚ್ ಮಾಡಲು ಯೋಜನೆ ಹಾಕಿಕೊಂಡಿದೆ. ಈ ಸಮುದ್ರಯಾನ ಯೋಜನೆಯಲ್ಲಿ ಮೂರು ಜನ ಆರು ಸಾವಿರ ಅಡಿ ಆಳಕ್ಕೆ ಇಳಿಯಲಿದ್ದಾರೆ.

2024ಕ್ಕೆ ಈ ಸಬ್ ಮರ್ಸಿಬಲ್ ಮತ್ಸ್ಯ ಮಿಷನ್ ಅನ್ನು ಕರಾವಳಿ ಮೂಲಕ ಬಂಗಾಳ ಕೊಲ್ಲಿಯ ಮೂಲದ ಆಳದವರೆಗೂ ಕಳುಹಿಸುವ ಯೋಜನೆ ಇದಾಗಿದೆ. ಈ ಮೂಲಕ ಸಮುದ್ರದ ಆಳದಲ್ಲಿರುವ ಖನಿಜಗಳ ಪತ್ತೆ ಮಾಡಲಾಗುತ್ತದೆ. ನೀರಿನ ಆಳದಲ್ಲಿ ಕೋಬಾಲ್ಟ್, ನಿಕ್ಕಲ್, ಮ್ಯಾಂಗನೀಸ್, ಹೈಡ್ರೋಥರ್ಮಲ್ ಸಲ್ಫೈಡ್ ಮತ್ತು ಗ್ಯಾಸ್ ಹೈಡ್ರೇಟ್ ಖನಿಜಗಳು ಶೋಧನೆ ಮಾಡಲಿವೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment