ಮುಂದಿನ ಸಿಎಂ ನಿರಾಣಿ : ಭಕ್ತರ ಕೋರಿಕೆ ಈಡೇರಿಸ್ತಾನ ದೇವ್ರು..!

suddionenews
1 Min Read

ವಿಜಯಪುರ : ಸಿಎಂ ಸ್ಥಾನದಿಂದ ಇಷ್ಟರಲ್ಲೇ ಬಸವರಾಜ್ ಬೊಮ್ಮಾಯಿ ಕೆಳಗಿಳಿಯುತ್ತಾರೆ ಎಂಬ ಗುಸುಗುಸು ಪಿಸು ಪಿಸು ಕೇಳಿಸುತ್ತಿದೆ. ಈ ಬೆನ್ನಲ್ಲೇ ಮುಂದಿನ ಸಿಎಂಗಾಗಿ ಕಸರತ್ತುಗಳು ನಡೆಯುತ್ತಿವೆ. ರಿಸರ್ವೇಷನ್ ಮಾಡಿಸಿರುವವರು ಒಂದಷ್ಟು ಮಂದಿಯಾದ್ರೆ, ನಮ್ಮವರನ್ನೇ ಸಿಎಂ ಮಾಡಿಸಿ ಅಂತ ಡಿಮ್ಯಾಂಡ್ ಇಡ್ತಾ ಇರೋರು ಇನ್ನೊಂದಷ್ಟು ಮಂದಿ.

ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದಾಗಲೇ ಮುರುಗೇಶ್ ನಿರಾಣಿ ಕೂಡ ಸಿಎಂ ಸ್ಥಾನದ ರೇಸ್ ನಲ್ಲಿದ್ದವರು. ಇನ್ನೇನು ಮುರುಗೇಶ್ ನಿರಾಣಿಯೇ ಸಿಎಂ ಆಗ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಆದ್ರೆ ಅದು ಕೈ ತಪ್ಪಿ ಹೋಗಿತ್ತು. ಆದ್ರೆ ಮತ್ತೆ ಸಿಎಂ ಸ್ಥಾನಕ್ಕಾಗಿ ಇದೀಗ ಮುರುಗೇಶ್ ನಿರಾಣಿ ಭಕ್ತರು ದೇವರ ಮೊರೆ ಹೋಗಿದ್ದಾರೆ.

ಜಿಲ್ಲೆಯ ಸಿಂದಗಿ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಭೀಮಾಶಂಕರ ಜಾತ್ರಾ ಮಹೋತ್ಸವ ಜರುಗಿದೆ. ಈ ಜಾತ್ರೆಯಲ್ಲಿ ಮುರುಗೇಶ್ ನಿರಾಣಿ ಬಗ್ಗರ ಭಕ್ತರು ಬೇಡಿಕೊಂಡಿದ್ದಾರೆ. ಬಾಳೆಹಣ್ಣಿನಲ್ಲಿ ಮುಂದಿನ ಸಿಎಂ ಮುರುಗೇಶ್ ನಿರಾಣಿ ಎಂದು ಬರೆದು ರಥಕ್ಕೆ ಎಸೆದಿದ್ದಾರೆ. ಬಿಜೆಪಿಯ ಯುವ ಮುಖಂಡ ಸಿದ್ದು ರೇವೂರು ಈ ರೀತಿ ಬಾಳೆಹಣ್ಣಿನ ಮೇಲೆ ಬರೆದು ವಿಶೇಷವಾಗಿ ಹರಕೆ ತೀರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *