ಗಂಟೆ, ಶಂಖನಾದದಿಂದ ಮಾಲಿನ್ಯ : ದೊಡ್ಡಗಣಪತಿ ದೇವಸ್ಥಾನದ ನೋಟೀಸ್ ವಿಚಾರಕ್ಕೆ ಆರಗ ಜ್ಞಾನೇಂದ್ರ ಏನಂದ್ರು..?

suddionenews
1 Min Read

ಬೆಂಗಳೂರು: ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಇಂದು ದೇವಸ್ಥಾನದ ವಿಚಾರವಾಗಿ ಹೆಚ್ಚು ಸದ್ದು ಮಾಡಿದೆ. ದೊಡ್ಡ ಗಣತಿ ದೇವಸ್ಥಾನಕ್ಕೆ ನೀಡಿದ ನೋಟೀಸ್ ವಿಚಾರಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಪ್ರಸ್ತಾಪಿಸಿದ್ದಾರೆ.

ದೇವಾಲಯಗಳಲ್ಲಿ ಸೌಂಡು, ಧ್ವನಿವರ್ಧಕ ಹಾಗೂ ಡಮರುಗ, ಶಂಖನಾದ ಬಳಸದಂತೆ ಮುಜರಾಯಿ ಇಲಾಖೆ ದೇವಸ್ಥಾನಗಳಿಗೆ ನೋಟೀಸ್ ನೀಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿ ಟಿ ರವಿ, ಗಂಟೆ ಶಬ್ದದಿಂದ, ಶಂಖನಾದಿಂದ ಮಾಲಿನ್ಯ ಅಂತಾರೆ. ಗಂಟೆಯಿಂದ ಶಬ್ದ ಮಾಲಿನ್ಯ ಆಗುತ್ತಾ..? ಯಾರಿಗೆ ಕೆಟ್ಟ ಹೆಸರು ತರಲು ಹೀಗೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಸರ್ಕಾರ ನಿಮ್ದೆ ಇದೆ, ಪಿತೂರಿ ಯಾರು ಮಾಡ್ತಾರೆ ಎಂದು ಶಿವಲಿಂಗೇಗೌಡ ಪ್ರಶ್ನಿಸಿದ್ದಾರೆ.

ಇದೇ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಈ ಸಂಬಂಧ ನಮ್ಮ ಇಲಾಖೆಯಿಂದ ಯಾವುದೇ ಆದೇಶವಾಗಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪತ್ರ ಬಂದಿತ್ತು. ಅದರ ಮೇರೆಗೆ ಪೊಲೀಸ್ ಇಲಾಖೆ ಸೂಚನೆ ಕೊಟ್ಟಿದೆ ಅಷ್ಟೇ ಎಂದು ಉತ್ತರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *