ಸಿದ್ದರಾಮಯ್ಯ ಜೊತೆ ಸ್ಪರ್ಧೆಗಿಳಿಯಲು ಜೆಡಿಎಸ್ ನಲ್ಲೂ ಇಲ್ಲ, ಬಿಜೆಪಿಯಲ್ಲೂ ಇಲ್ಲ : ಸಿಟಿ ರವಿ ವ್ಯಂಗ್ಯ

1 Min Read

ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ಗರಂ ಆಗಿದ್ದಾರೆ. ಅವರು ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿದ್ದಾರೆ. ಅವರಷ್ಟು ಸುಳ್ಳನ್ನು ಕರಗತ ಮಾಡಿಕೊಂಡವರು ಯಾರು ಇಲ್ಲ. ಸುಳ್ಳಿನ ವಿಚಾರದಲ್ಲಿ ಅವರಿಗೆ ಪೈಪೋಟಿ ನೀಡಲು ಅಸಾಧ್ಯ. ಸತ್ಯದ ತಲೆ ಮೇಲೆ ಹೊಡೆಯುವ ಹಾಗೆ ಸುಳ್ಳು ಹೇಳುತ್ತಾರೆ. ಸುಳ್ಳೆ ಎಲ್ಲವಯ್ಯ ಎಂಬುದು ಸಿದ್ದರಾಮಯ್ಯ ಅವರ ಸಿದ್ಧಾಂತ ಎಂದು ಕಿಡಿಕಾರಿದ್ದಾರೆ.

ಸ್ವತಂತ್ರ ಬಂದಾಗ ನಮ್ಮ ದೇಶದ ಜನಸಂಖ್ಯೆ 33 ಕೋಟಿ. ಈಗ ಈಗ 138 ಕೋಟಿ ಇದೆ. ಯಾವುದು ಸುಳ್ಳು 33 ಕೋಟಿ ಇದ್ಧ್ದು 138 ಕೋಟಿ ಆಗಿದ್ದು ಸುಳ್ಳಾ. ಇನ್ನು ಕರ್ನಾಟಕದ ಜನಸಂಖ್ಯೆ ಒಂದೂವರೆ ಕೋಟಿ ಇದ್ದದ್ದು ಏಳೂವರೆ ಕೋಟಿ ಆಗಿದೆ. ಹಾಗಾದರೆ ಯಾವುದು ಸುಳ್ಳು. ಯಾರಿಗೂ ಹೇಳುವುದಕ್ಕೆ ಬರಲ್ಲ ಆ ರೀತಿ ಸತ್ಯದ ತಲೆ‌ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಾರೆ. ಸುಳ್ಳಿನ ವಿಚಾರದಲ್ಲಿ ಅವರ ಜೊತೆ ಸ್ಪರ್ಧೆಗಿಳಿಯುವವರು ಜೆಡಿಎಸ್ ನಲ್ಲೂ ಇಲ್ಲ ಬಿಜೆಪಿಯಲ್ಲೂ ಇಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *