ಖಾವಿ ಬೆಂಕಿ ಇದ್ದಂತೆ, ಅದಕ್ಕೆ ಕೈ ಹಾಕಿರುವ ಸಿದ್ದರಾಮಯ್ಯ ಸುಟ್ಟು ಭಸ್ಮರಾಗುತ್ತಾರೆ : ಕಟೀಲ್ ಹೇಳಿಕೆ

suddionenews
1 Min Read

ಮಂಗಳೂರು: ಹಿಜಾಬ್ ವಿಚಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸ್ವಾಮೀಜಿಗಳನ್ನ ಉದಾಹರಣೆ ಕೊಟ್ಟಿದ್ದು, ಇದೀಗ ಬಿಜೆಪಿಗರು ಕೆರಳಿ ಕೆಂಡವಾಗಿದ್ದಾರೆ. ಅದನ್ನೇ ಅಸ್ತ್ರವಾಗಿಟ್ಟುಕೊಂಡು, ಸಿದ್ದರಾಮಯ್ಯ ವಿರುದ್ಧ ಚಾಟಿ ಬೀಸುತ್ತಿದ್ದಾರೆ.

ಈ ಸಂಬಂಧ ಮಂಗಳೂರಿನಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ವೀರಶೈವ ಲಿಂಗಾಯತ ಒಡೆಯುವ ಕೆಲಸವನ್ನ ಇದೇ ಸಿದ್ದರಾಮಯ್ಯ ಮಾಡಿದ್ದರು. ಅದರ ಪರಿಣಾಮ ಕಾಂಗ್ರೆಸ್ ನಲ್ಲಿ ಏನಾಗಿದೆ ಅಂತ ಗೊತ್ತಾಗಿದೆ. ಆಂತರಿಕ ಜಗಳ ಇದೆ. ಡಿಕೆಶಿ ಗಿಂತ ಮೊದಲು ನಾನು ಅಂತ ತೋರಿಸಲು ದಿನ ಇಂಥ ರೀತಿಯ ಹೇಳಿಕೆಗಳನ್ನ ನೀಡುತ್ತಿದ್ದಾರೆ.

ಇದು ಭಾರತೀಯ ಸಂಸ್ಕೃತಿ, ಹಿಂದೂ ನಂಬಿಕೆಗೆ ಮೋಸ ಮಾಡಿದ್ದಾರೆ. ರಾಮಾಯಣ, ಭಗವದ್ಗೀತೆ ಓದಿದ್ದೇನೆ ಎಂದು ಹೇಳಿದ್ದಾರೆ. ಆದ್ರೆ ನಡೆದುಕೊಳ್ಳುವ ರೀತಿ ಯಾವ ರೀತಿ. ಅತಿ ಜ್ಞಾನ ಇದೆ ಅಂತಾರೆ. ಅತಿ ಹೆಚ್ಚು ಓದಿದ್ದೇನೆ ಅಂತಾರೆ. ಓದಿದ ಕೂಡಲೇ ದೊಡ್ಡವರಾಗುವುದಿಲ್ಲ. ನಂಬಿಕೆಯಿದ್ದಾಗ ಶ್ರೇಷ್ಠತೆ ಬರುತ್ತದೆ. ಅವರು ಚುನಾವಣೆ ಇಲ್ಲದಾಗ ಹಿಂದೂ ಅಂತಾರೆ. ಚುನಾವಣೆ ಇದ್ದಾಗ ಹಿಂದೂಗಳ ವಿರುದ್ಧ ನಿಲ್ಲುತ್ತಾರೆ. ಹಿಜಾಬ್ ಪರ ಮತ್ತು ಮದ್ರಾಸ್ ಪರ ನಿಲ್ಲುತ್ತೆ. ಹಿಜಾಬ್ ನ ಒಳಗೆ ಕಾಂಗ್ರೆಸ್ ಕಣ್ಮರೆಯಾಗುತ್ತೆ. ಹಿಂದೂ ನಂಬಿಕೆಗಳ ವಿರುದ್ಧ ಮಾತನಾಡಿದ್ದಾರೆ.

ರಾಜಪೀಠಕ್ಕಿಂತ ಗುರುಪೀಠ ಶ್ರೇಷ್ಟ. ಅದಕ್ಕೆ ಅವಮಾನ ಮಾಡಿದ್ದಾರೆ. ನಾನು ನಾಸ್ತಿಕ ಅಂತಾರೆ ಕದ್ದು ಮುಚ್ಚಿ ದೇವಸ್ಥಾನಕ್ಕೆ ಹೋಗ್ತಾರೆ, ಪ್ರಸಾದ ತಿಂತಾರೆ. ಇದೆಲ್ಲಾ ಅವರ ಅವನತಿಗೆ ಕಾರಣವಾಗುತ್ತೆ. ಖಾವಿ ಎನ್ನುವಂಥದ್ದು ಬೆಂಕಿ ಇದ್ದಂತೆ. ಇದರಿಂದ ಕಾಂಗ್ರೆಸ್ ಸುಟ್ಟು ಭಸ್ಮವಾಗುತ್ತೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *