ನಗರಸಭೆಯ ನೂತನ ಉಪಾಧ್ಯಕ್ಷರಾಗಿ ಎನ್.ಓ.ಅನುರಾಧ ಆಯ್ಕೆ

suddionenews
1 Min Read

ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್

ಸುದ್ದಿಒನ್,ಚಿತ್ರದುರ್ಗ, (ನ. 08) :  ನಗರಸಭೆಯ ಉಪಾಧ್ಯಕ್ಷರಾಗಿ ಎನ್.ಓ.ಅನುರಾಧರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಉಪಾಧ್ಯಕ್ಷರಾಗಿದ್ದ ಶ್ರೀಮತಿ ಶ್ವೇತಾ ವಿರೇಶ್ ರಾಜೀನಾಮೆಯಿಂದ ತೆರವಾಗಿದ್ದ ಈ ಸ್ಥಾನಕ್ಕೆ ಇಂದು ಚಿತ್ರದುರ್ಗ ನಗರದ ಜಿ.ಪಂ. ಸಭಾಂಗಣದಲ್ಲಿ ಇಂದು ನಡೆದ ಚುನಾವಣೆಯಲ್ಲಿ ಅನುರಾಧರವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ನಗರಸಭೆಯ ಉಪಾಧ್ಯಕ್ಷರಾಗಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ಘೋಷಣೆ ಮಾಡಿದರು.

35 ಜನ ಸದಸ್ಯರು ಮತ್ತು ಒಬ್ಬರು ಶಾಸಕರು ಹಾಗೂ ಒಬ್ಬರು ಸಂಸದರು ಸೇರಿದಂತೆ 37 ಜನ ಮತದಾನದ ಹಕ್ಕನ್ನು ಹೊಂದಿರುತ್ತಾರೆ. ಇಂದು ನಡೆದ ಚುನಾವಣೆಯಲ್ಲಿ 18 ಜನ ಮಾತ್ರ ಹಾಜರಾಗಿದ್ದರು. ಉಳಿದಂತೆ 19 ಜನ ಗೈರಾಗಿದ್ದರು. ಉಪಾಧ್ಯಕ್ಷರ ಅವಧಿ ಮುಂದಿನ ಒಂದು ವರ್ಷ ಎನ್ನಲಾಗಿದೆ.

ಚುನಾವಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಉಪಾಧ್ಯಕ್ಷರಾದ ಅನುರಾಧ, ಕುಡಿಯುವ ನೀರು, ಸ್ವಚ್ಚತೆ, ಬೀದಿ ದೀಪಗಳ ನಿರ್ವಹಣೆಯ ಬಗ್ಗೆ ಆದ್ಯತೆಯನ್ನು ನೀಡಲಾಗುವುದು. ವಾರ್ಡಗಳಲ್ಲಿ ಸಂಚಾರ ಮಾಡುವುದರ ಮೂಲಕ ಜನತೆಯ ಸಮಸ್ಯೆಯನ್ನು ಆಲಿಸಿ ಪರಿಹಾರಕ್ಕೆ ಪ್ರಯತ್ನ ಮಾಡಲಾಗುವುದೆಂದರು.

ಪೌರಾಯುಕ್ತರಾದ ಹನುಮಂತರಾಯಪ್ಪ, ವ್ಯವಸ್ಥಾಪಕರಾಧ ಮಂಜುಳಮ್ಮ ಸೇರಿದಂತೆ ನಗರಸಭೆಯ ಸಿಬ್ಬಂದಿಗಳು ಹಾಜರಿದ್ದರು ಚುನಾವಣೆಯ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *