ಶಾಸಕ ರೇಣುಕಾಚಾರ್ಯಗೆ ಕೊಲೆ ಬೆದರಿಕೆ : ದೂರು ಕೊಟ್ಟ ಶಾಸಕ ಹೇಳಿದ್ದೇನು..?

1 Min Read

ದಾವಣಗೆರೆ: ಕಳೆದ ಕೆಲವು ದಿನದಿಂದ ರಾಜ್ಯದಲ್ಲಿ ಹಿಜಾಬ್ ವಿಚಾರ ಸದ್ದು ಮಾಡುತ್ತಿತ್ತು. ಇದೀಗ ಹಲಾಲ್ ವಿವಾದ ಜೋರಾಗಿ ನಡೀತಿದೆ. ಈ ಬೆನ್ನಲ್ಲೆ ಸಿಎಂ ರಾಜಕೀಯ ಕಾರ್ಯದರ್ಶಿ ಮತ್ತು ಶಾಸಕ ರೇಣುಕಾಚಾರ್ಯ ಅವರಿಗೆ ಕೊಲೆ ಬೆದರಿಕೆ ಕರೆಗಳು ಬಂದಿವೆಯಂತೆ. ಈ ಸಂಬಂಧ ರೇಣುಕಾಚಾರ್ಯ ಪೊಲೀಸರಿಗೆ ದೂರು ನೀಡಿದ್ದಾರೆ‌.

ಇನ್ನೂ ನಾಲ್ಕೇ ದಿನದಲ್ಲಿ ನಿಮ್ಮನ್ನು ಕೊಲೆ ಮಾಡ್ತೀವಿ ಅಂತ ಬೆದರಿಕೆ ಕರೆ ಮಾಡಿದ್ದಾರಂತೆ. ಈ ಸಂಬಂಧ ದೂರು ನೀಡಿ ಮಾತನಾಡಿರುವ ಶಾಸಕ ರೇಣುಕಾಚಾರ್ಯ, ಇಂದು ಬೆಳಗ್ಗೆಯಿಂದ ಹನ್ನೊಂದು ಬಾರಿ ಕರೆ ಬಂದಿದೆ. ಅದು ಒಂದೇ ನಂಬರಿನಿಂದ. ಅದು ಅಪರಿಚಿತ ಕರೆ ಎಂದು ನಾನು ರಿಸೀವ್ ಮಾಡಲು ಹೋಗಿರಲಿಲ್ಲ. ಆದರೆ ಹೊನ್ನಾಳಿಗೆ ಹೊರಟಾಗ ಅದೇ ನಂಬರ್ ನಿಂದ ಮತ್ತೆ ಕರೆ ಬಂತು. ಆಗ ರಿಸೀವ್ ಮಾಡಿದೆ.

ಆ ಕಡೆಯಿಂದ ಮಾತನಾಡಿದ ವ್ಯಕ್ತಿ ಮಾತು ಶುರು ಮಾಡುತ್ತಲೇ ಏಕವಚನದಲ್ಲೇ ಮಾತನಾಡಿದ. ಅವಾಚ್ಯ ಪದಗಳಿಂದ ಬೈದ. ಹಲಾಲ್ ಕಟ್, ಹಿಜಾಬ್ ಅಂತ ಮುಸ್ಲಿಂ ವಿರೋಧಿ ಹೇಳಿಕೆಗಳನ್ನ ನೀಡುತ್ತಿದ್ದೀಯಾ. ಇನ್ನು ನಾಲ್ಕೈದು ದಿನದಲ್ಲಿ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ. ನನ್ನ ಮಾತ್ರವಲ್ಲ ಬಿಜೆಪಿ ಪಕ್ಷದ ಕೆಲವರ ಬಗ್ಗೆಯೂ ಹೇಳಲು ಅಸಾಧ್ಯವೆನಿಸುವ ಪದಗಳಲ್ಲಿ ನಿಂದಿಸಿದ್ದಾನೆ. ನೀನು ಯಾರು ಎಂದು ಕೇಳಿದರು ನನ್ನ ಹೆಸರು ನಿನಗೆ ಬೇಡ ಎಂದನು. ಆತನ ಕಾಲ್ ರೆಕಾರ್ಡ್ ಮಾಡಿದ್ದೇನೆ. ಈಗ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ವಿವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *