ಚಿತ್ರದುರ್ಗ | ಆಕೆಗೆ ವಾರ್ಷಿಕೋತ್ಸವದ ಸಂಭ್ರಮ.. ಈತನಿಗೆ ಕೊಲೆ ಮಾಡುವ ಹಂಬಲ…

1 Min Read

ಚಿತ್ರದುರ್ಗ, (ಜ.07): ಮದುವೆ ಅಂದ್ರೆ ಮದುವೆ ವಾರ್ಷಿಕೋತ್ಸವದ ಸಂಭ್ರಮ ಇದ್ದೆ ಇರುತ್ತೆ. ಅದರಲ್ಲೂ ಪತಿಯಿಂದ ಏನಾದ್ರೂ ಸ್ಪೆಷಲ್ ಗಿಫ್ಟ್ ಸಿಗುತ್ತೆ ಅನ್ನೋದೆ ಪತ್ನಿಯ ನಿರೀಕ್ಷೆಯಾಗಿರುತ್ತೆ.

ಆತ ಹೆಂಡತಿಗೆ ಕೊಟ್ಟ ಗಿಫ್ಟ್ ಹೆಂಡತಿ ಮಾತ್ರವಲ್ಲ ಇಡೀ ಕುಟುಂಬಸ್ಥರು ಮರೆಯದಂತ ಗಿಫ್ಟ್ ಅದು. ಹೌದು ಮದುವೆ ವಾರ್ಷಿಕೋತ್ಸವ ದಿನದಂದೇ ಕೊಲೆ ಮಾಡಿರುವ ಘಟನೆ ನಡೆದಿದೆ.

ಕಳೆದ ತಿಂಗಳ 25 ರಂದು ನಡೆದ ಕೊಲೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

ತಾಲ್ಲೂಕಿನ ಕೋಣನೂರು ಗ್ರಾಮದ
26 ವರ್ಷದ ಸುಮಾ ಕೊಲೆಯಾದ ದುರ್ದೈವಿ. ನಾರಪ್ಪ ಕೊಲೆ ಮಾಡಿದ ಆರೋಪಿ.

ಡಿಸೆಂಬರ್ 25 ರಂದು ಇವರಿಬ್ಬರ ಮದುವೆ ವಾರ್ಷಿಕೋತ್ಸವದ ದಿನ. ಆದ್ರೆ ಆರೋಪಿ ನಾರಪ್ಪ ಆತನ ಪತ್ನಿಯನ್ನ ಕೊಲೆಗೈದು ಬಚ್ಚಲು ಮನೆಯಲ್ಲೇ ಪ್ಲಾಸ್ಟಿಂಗ್ ಮಾಡಿಟ್ಟಿದ್ದ. ಆದ್ರೆ ಏನು ಗೊತ್ತಿಲ್ಲದಂತೆ ಇದ್ದದ್ದು ಅಲ್ಲದೆ, ತನ್ನ ಪತ್ನಿ ಕಾಣೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದಾನೆ.

ದೂರು ದಾಖಲಿಸಿಕೊಂಡು  ಪೊಲೀಸರು ತನಿಖೆ ನಡೆಸಿದ್ದು, ಕೊಲೆಗಾರ ಯಾರೆಂಬುದನ್ನ ಬಾಯಿ ಬಿಡಿಸಿದ್ದಾರೆ.

ಪೊಲೀಸರ ತನಿಖೆ ವೇಳೆ ಹೆಂಡತಿಯನ್ನು ಕೊಲೆ ಮಾಡಿ, ಬಚ್ಚಲು ಮನೆಯಲ್ಲೇ ಹೂತಾಕಿರುವುದನ್ನ ಒಪ್ಪಿಕೊಂಡಿದ್ದಾನೆ. ವಿಚಾರ ತಿಳಿದು ಪೋಷಕರು ದುಃಖತಪ್ತರಾಗಿದ್ದಾರೆ. ವರದಕ್ಷಿಣೆಯ ಕಿರುಕುಳದಿಂದ ಈ ರೀತಿ ಮಾಡಿದ್ದಾನೆಂದು ಆರೋಪಿಸಿದ್ದಾರೆ. ಅದಕ್ಕೋಸ್ಕರ ಪ್ರತಿನಿತ್ಯ ಜಗಳವಾಗುತ್ತಿತ್ತು ಎಂದಿದ್ದಾರೆ.

ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಭರಮಸಾಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *