CSK ತಂಡಕ್ಕೆ ರಾಜೀನಾಮೆ ನೀಡಿದ ಧೋನಿ : ಜಡೇಜಾ ಈಗ CSK ಸಾರಥಿ

ಕೆಲವೇ ದಿನಗಳಲ್ಲಿ ಐಪಿಎಲ್ ಪಂದ್ಯ ಆರಂಭವಾಗಲಿದೆ. ಆದ್ರೆ ಇಷ್ಟು ಕಡಿಮೆ ಅವಧಿ ಇರುವಾಗಲೇ ಎಂ ಎಸ್ ಧೋನಿ ಸಿಎಸ್ ಕೆ ತಂಡಕ್ಕೆ ರಾಜೀನಾಮೆ ನೀಡಿದ್ದಾರೆ.

ಧೋನಿ ನಿರ್ಗಮನದ ಬಳಿಕ ಸಿಎಸ್ ಕೆ ತಂಡವನ್ನ‌ ಆಲ್ ರೌಂಡರ್ ರವೀಂದ್ರ ಜಡೇಜಾ ಮುನ್ನಡೆಸಲಿದ್ದಾರೆ. ಐಪಿಎಲ್ ನಲ್ಲಿ ಧೋನಿ ಚೆನ್ನೈ ಸೂಪರ್ಸ್ ಕಿಂಗ್ ತಂಡಕ್ಕೆ ರಾಜೀನಾಮೆ ನೀಡಿದ್ದಾರೆ. ಧೋನಿ ಅವರ ರಾಜೀನಾಮೆ ವಿಚಾರವನ್ನು CSK ಟ್ವೀಟ್ ಮಾಡಿ ತಿಳಿಸಿದೆ.

ಈ ಬಾರಿ 15 ಆವೃತ್ತಿ ನಡೆಯಲಿದೆ. ಈ ಆವೃತ್ತಿಯಲ್ಲೂ ಧೋನಿ ಕ್ಯಾಪ್ಟನ್ ಆಗಿರಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದ್ರೆ ಈಗ ದಿಢೀರನೆ ಅವರು ರಾಜೀನಾಮೆ ಘೋಷಿಸಿರುವುದು ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ. ಧೋನಿಯವರು ಯಾವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ಇನ್ನು ಅಸ್ಪಷ್ಟವಾಗಿಯೇ ಇದೆ. ಧೋನಿ ಅವರ ರಾಜೀನಾಮೆಯಿಂದ ರವೀಂದ್ರ ಜಡೇಜಾ ಅವರಿಗೆ ಸಾಕಷ್ಟು ಜವಬ್ದಾರಿ ಹೆಚ್ಚಿದೆ.

Share This Article
Leave a Comment

Leave a Reply

Your email address will not be published. Required fields are marked *