ರೇಣುಕಾಚಾರ್ಯ ಕುಟುಂಬದಿಂದ ವಿಶೇಷ ಪೂಜೆ..ಯಾತಕ್ಕಾಗಿ ಗೊತ್ತಾ..?

suddionenews
1 Min Read

ದಾವಣಗೆರೆ: ಶ್ರಾವಣ ಮಾಸದ ಗೌರಿ ಅಮಾವಾಸ್ಯೆ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯದರ್ಶಿಯಾಗಿದ್ದ ಎಂ ಪಿ ರೇಣುಕಾಚಾರ್ಯ ಇಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿ, ರಾಜಕೀಯದ ಏಳ್ಗೆಗೆ ಬೇಡಿಕೊಂಡಿದ್ದಾರೆ.

ನ್ಯಾಮತಿ ತಾಲೂಕಿನ ಗೋವಿಕೋವಿ ಗ್ರಾಮದ ಗುಳ್ಳಮ್ಮ ದೇವು ದರ್ಶನ ಪಡೆದು. ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಲಿ ಎಂದು ಗೋವಿಕೋವಿಗೆ ಕುಟುಂಬಸ್ಥರು ಹರಕೆ ಹೊತ್ತಿದ್ದರಂತೆ.

ಇನ್ನಹ ಕಳೆದ ಸಚಿವ ಸಂಪುಟದಲ್ಲಿ ಸಚಿವರಾಗುವ ನಿರೀಕ್ಷೆ ತುಂಬಾನೆ ಇತ್ತು. ಆದ್ರೆ ಆ ನಿರೀಕ್ಷೆ ಸುಳ್ಳಾಗಿತ್ತು. ಬೊಮ್ಮಾಯಿ ಸಂಪುಟದಲ್ಲಿ ಇನ್ನು ನಾಲ್ಕು ಸಚಿವ ಸ್ಥಾನ ಹಾಗೆಯೇ ಉಳಿದಿದೆ. ಹೀಗಾಗಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಜೊತೆಗೆ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಲಿ ಎಂಬ ಮಹಾದಾಸೆಯಿಂದ ಇಂದು ದೇವರಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *