ಕಾಂಗ್ರೆಸ್ ನಲ್ಲಿ ಹಿಂದೂಗಳಿಗೆ ಅಂತ ಯಾರಿದ್ದಾರೆ : : ಸಂಸದ ಪ್ರತಾಪ್ ಸಿಂಹ

suddionenews
1 Min Read

ಮೈಸೂರು: ಜಿಲ್ಲೆಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್ ನಾಯಕರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಹಿಂದೂಗಳ ಪರವಾಗಿ ಕಾಂಗ್ರೆಸ್ ನವರು ಯಾರು ಧ್ವನಿ ಎತ್ತಿದ್ದಾರೆ. ಅವರು ಅಧಿಕಾರಕ್ಕೆ ಬಂದರೆ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದಂತೆ ಆಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕನ್ನಡಿಗರು ಸರ್ಕಾರ ಬಂದ ರೀತಿಯಾಗಲ್ಲ. ಅದಕ್ಕೆ ಎಚ್ಚೆತ್ತುಕೊಳ್ಳಬೇಕು. ಈಗಿನಿಂದಲೇ ನಮ್ಮ ಮಂಡ್ಯ ಜಿಕ್ಲೆಯಲ್ಲಿಯೂ ಕೂಡ ನಮ್ಮ ಬಿಜೆಪಿಗೆ ಶಕ್ತಿ ತರುವ ಮುಖಾಂತರವಾಗಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದು ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು.

ಶ್ರೀರಂಗಪಟ್ಟಣದ ಬಗ್ಗೆ ನಾನು ಹೆಚ್ಚು ಹೇಳಬೇಕಿಲ್ಲ. ಯೋಚನೆ ಮಾಡಿ, ಶ್ರೀರಂಗಪಟ್ಟಣದಲ್ಲಿ ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯ ಅವರು ಮಾಡಲು ಹೋದರಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಂತ ಸಂದರ್ಭದಲ್ಲಿ ಯಾವ ನಮ್ಮ ಯದುವಂಶ, ಯಾವ ನಮ್ಮ ಮೈಸೂರು ಮಹಾರಾಜರು ಈ ಕನ್ನಂಬಾಡಿ ಕಟ್ಟೆಯನ್ನು ಕಟ್ಟಿದ್ದರೋ, ನೀರನ್ನ ಕೊಟ್ಟರೋ, ಅನ್ನ ಕೊಟ್ಟರೋ ಅವರು ನೆನಪಾಗಲೇ ಇಲ್ಲ ಸಿದ್ದರಾಮಯ್ಯ ಅವರಿಗೆ. ನಮ್ಮ ಯದುವಂಶವನ್ನು ನಿರ್ನಾಮ ಮಾಡಲು ಹೊರಟಿದ್ದ ಟಿಪ್ಪು ಜಯಂತಿ ಮಾಡಲು ಹೊರಟಿದ್ದರು. ಮೈಸೂರು ವಿಶ್ವವಿದ್ಯಾಲಯವನ್ನು ಕಟ್ಟಿ, ಸಿದ್ದರಾಮಯ್ಯ ಅವರು ಕಾನೂನು ಪದವಿಯನ್ನು ಪಡೆದುಕೊಂಡರಲ್ಲ, ಆ ಕಾನೂನು ಪದವಿಯನ್ನು ಕೊಟ್ಟಿದ್ದು ಮೈಸೂರು ವಿಶ್ವವಿದ್ಯಾಲಯ. ಆದರೆ ಜಯಂತಿ ಮಾಡುವಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ನೆನಪಾಗಲಿಲ್ಲ, ಹೈದರಾಲಿ ಮಗ ಟಿಪ್ಪು ನೆನಪಾದ ಎಂದು ವಾಗ್ದಾಳಿ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *