ಸಂಸದ ಡಿಕೆ ಸುರೇಶ್ ಸವಾಲು : ಉಸ್ತುವಾರಿ ನೇಮಿಸ್ತಾರಾ ಸಿಎಂ..?

1 Min Read

ಬೆಂಗಳೂರು: ರಾಮನಗರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನ ನೇಮಕ ಮಾಡದೆ ಇರೋದಕ್ಕೆ ಸಂಸದ ಡಿ ಕೆ ಸುರೇಶ್ ಸಿಎಂ ಮೇಲೆ ಗರಂ ಆಗಿದ್ದಾರೆ. ಧ್ವಜಾರೋಹಣದಂದು ಸಂಸದ ಸುರೇಶ್ ಆಡಿದ ಮಾತು ಇದೀಗ ಸಿಎಂ ಬಸವರಾಜ್ ಬೊಮ್ಮಾಯಿ‌ ಅವರ ತಲೆ‌ಕೆಡಿಸಿದೆ.

ಜನವರಿ3 ರಂದು ರಟಮನಗರದಲ್ಲಿ ಕಾರ್ಯಕ್ರಮವೊಂದು ನಡೆದಿದೆ. ಜಿಲ್ಲಾಡಳಿತದಿಂದ ನಡೆದ ಈ ಕಾರ್ಯಕ್ರಮದಲ್ಲಿ ಸಂಸದ ಡಿ ಕೆ ಸುರೇಶ್ ಮಾತನಾಡಿದ್ದು, ನೀವು ಧ್ವಜಾರೋಹಣಕ್ಕಷ್ಟೇ ನೀವೂ ಸಚಿವರನ್ನ ನೇಮಿಸಿದ್ದೀರಿ. ಬೇಕಾದ್ರೆ ಸರ್ಕಾರದ ಆದೇಶದ ಪ್ರತಿ ತೆಗೆದು ನೋಡಿ ಎಂದು ಸವಾಲು ಹಾಕಿದ್ದರು.

ವೇದಿಕೆಯಲ್ಲೇ ಈ ರೀತಿ ಸವಾಲು ಹಾಕಿದ್ದು ಬಿಜೆಪಿ ನಾಯಕರಿಗೆ ಮುಜುಗರವಾದಂತಾಗಿದೆ. ಹೀಗಾಗಿ ಸಿಎಂ ಬೊಮ್ಮಾಯಿ ಅವರಿಗೆ ಸಚಿವರಿಂದಲೇ ಈ ವಿಚಾರವಾಗಿ ಒತ್ತಡ ಹೇರಲಾಗ್ತಿದೆ ಎನ್ನಲಾಗ್ತಿದೆ. ಗಣರಾಜ್ಯೋತ್ಸವ ಮುನ್ನವೇ ಉಸ್ತುವಾರಿ ಸಚಿವರನ್ನ ನೇಮಕ ಮಾಡಿ ಎಂದು ಒತ್ತಡ ಹೇರಲಾಗ್ತಿದೆ ಎಂದು ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *