ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 20 : ತಾಲ್ಲೂಕಿನ ಸೂಲೇನಹಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ಓಬಣ್ಣನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ 48 ಗಂಟೆಯೊಳಗೆ ಕೊಲೆ ಮಾಡಿದ ಐವರು ಆರೋಪಿಗಳನ್ನು ಮೊಳಕಾಲ್ಮೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

1] ಜಿತೇಂದ್ರ, ಆರ್.
2] ಕೆ.ಎಸ್. ಬೋರಯ್ಯ
3] ಬೋರಮ್ಮ
4] ಕರಿಬಸಮ್ಮ
5] ಎಂ.ಟಿ ಅಜ್ಜಣ್ಣ ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆ :
ಮೊಳಕಾಲ್ಮೂರು ತಾಲ್ಲೂಕಿನ ಸೂಲೇನಹಳ್ಳಿ ಗ್ರಾಮದ
ಲಕ್ಷ್ಮಣರವರ ಜಮೀನಿನಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ
ಟ್ರಾಕ್ಟರ್ ಟ್ರೈಲರ್ ಮಧ್ಯದ ಕಬ್ಬಿಣದ ಆಂಗ್ಲರ್ ಮೇಲೆ ಓಬಣ್ಣನ 2 ಕೈ ಮತ್ತು 2 ಕಾಲುಗಳನ್ನು ಟವಲ್ ನಿಂದ ಕಟ್ಟಿ ಓಬಣ್ಣನನ್ನು ಬೋರಲು ಮಲಗಿಸಿ, ಟ್ರಾಲಿಯ ಹೈಡ್ರಾಲಿಕ್ ನ್ನು ಮೇಲಕ್ಕೆತ್ತಿ ಕುತ್ತಿಗೆಯ ಮೇಲೆ ಟ್ರಾಲಿಯ ಹೈಡ್ರಾಲಿಕ್ ಕೆಳಗೆ ಇಳಿಸಿ ಕೊಲೆ ಮಾಡಿರುತ್ತಾರೆಂದು ಫೆಬ್ರವರಿ 17 ರಂದು ದೂರು ನೀಡಲಾಗಿತ್ತು.
ಈ ದೂರಿನ ಮೇರೆಗೆ ಆರೋಪಿಗಳನ್ನು ಪತ್ತೆ ಮಾಡಲು ರಂಜಿತ್ ಕುಮಾರ್ ಬಂಡಾರು, ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ, ಡಾ.ಶಿವಕುಮಾರ ಆರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ ಹಾಗೂ ಸತ್ಯನಾರಾಯಣರಾವ್, ಪೊಲೀಸ್ ಉಪಾಧೀಕ್ಷಕರು, ಚಳ್ಳಕೆರೆ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಮೊಳಕಾಲ್ಮರು ಪೊಲೀಸ್ ವೃತ್ತ ನಿರೀಕ್ಷಕರವರಾದ ನಾಗರಾಜ್, ಆರ್. ರವರ ನೇತೃತ್ವದಲ್ಲಿ ಮೊಳಕಾಲ್ಮೂರು ಪೊಲೀಸ್ ಉಪ ನಿರೀಕ್ಷಕರವರಾದ ಮಹೇಶ್ ಲಕ್ಷ್ಮಣ ಹೊಸಪೇಟ ಮತ್ತು ಅವರ ಸಿಬ್ಬಂದಿಯವರನ್ನು ಸೇರಿ ತಂಡ ರಚನೆ ಮಾಡಲಾಗಿತ್ತು.
ಆರೋಪಿಗಳ ಪತ್ತೆ ಕಾರ್ಯ ಕೈಗೊಂಡು ಘಟನೆ ನಡೆದ 48 ಗಂಟೆಯೊಳಗೆ ಐವರು ಆರೋಪಿಗಳನ್ನು ಮೊಳಕಾಲ್ಮೂರು ವೃತ್ತ ನಿರೀಕ್ಷಕರವರಾದ ನಾಗರಾಜ್, ಆರ್. ಹಾಗೂ ಪಿ.ಎಸ್.ಐ ರವರಾದ ಮಹೇಶ್ ಲಕ್ಷ್ಮಣ ಹೊಸಪೇಟ ಹಾಗೂ ಸಿಬ್ಬಂದಿಯವರಾದ ವೀರಣ್ಣ, ಓಬಣ್ಣ, ಹರೀಶ, ಸತೀಶ್, ಖಾದರ್ ಭಾಷ, ಪ್ರಭುದೇವ, ಬಜ್ಜಣ್ಣ, ನಂದಪ್ಪ, ಲಕ್ಷ್ಮೀಪತಿ, ಹುಲುಗಪ್ಪ ಭೂವಿ, ಆಶಾರಾಣಿ ಮತ್ತು ಸೌಭಾಗ್ಯ ಬಾರಕೇರ ರವರ ತಂಡ ಬಂಧಿಸಿರುತ್ತಾರೆ.
ಆರೋಪಿಗಳ ಪತ್ತೆ ಕಾರ್ಯವನ್ನು ಕೈಗೊಂಡ ಈ ತಂಡಕ್ಕೆ ರಂಜಿತ್ ಕುಮಾರ್ ಬಂಡಾರು, ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ, ಡಾ.ಶಿವಕುಮಾರ ಆರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ ಮತ್ತು ಸತ್ಯನಾರಾಯಣರಾವ್, ಪೊಲೀಸ್ ಉಪಾಧೀಕ್ಷಕರು, ಚಳ್ಳಕೆರೆ ಉಪ ವಿಭಾಗ ರವರು ಪ್ರಶಂಶಿಸಿರುತ್ತಾರೆ.




