ಬಳ್ಳಾರಿ ಉಸ್ತುವಾರಿಯನ್ನ ಶ್ರೀರಾಮುಲುಗೆ ನೀಡಿ : ಸೋಮಶೇಖರ್ ರೆಡ್ಡಿ ಮಾತಿಗೆ ಆನಂದ್ ಸಿಂಗ್ ಏನಂದ್ರು..?

suddionenews
1 Min Read

ಬಳ್ಳಾರಿ : ಪರಿಷತ್ ಚುನಾವಣಾ ಪ್ರಚಾರ ಭರ್ಜರಿಯಾಗಿ ನಡೀತಾ ಇದೆ. ಇಂದು ಜಿಲ್ಲೆಯಲ್ಲಿ ತಮ್ಮ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗಿಯಾದ ಬಿಜೆಪಿ ನಾಯಕರು, ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸೋಮಶೇಖರ್ ರೆಡ್ಡಿ ಬಳ್ಳಾರಿ ಉಸ್ತುವಾರಿ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ.

ಅದೇ ಸಭೆಯಲ್ಲಿ ಆನಂದ್ ಸಿಂಗ್ ಕೂಡ ಭಾಗಿಯಾಗಿದ್ದರು. ಅವರ ಮುಂದೆಯೇ ಮಾತನಾಡಿದ ಸೋಮಶೇಖರ್ ರೆಡ್ಡಿ, ವಿಜಯನಗರ ಜಿಲ್ಲೆ ಆದ್ಮೇಲೆ ಆನಂದ್ ಸಿಂಗ್ ಬ್ಯುಸಿಯಾಗಿದ್ದಾರೆ. ಅಖಂಡ ಬಳ್ಳಾರಿ ಉಸ್ತುವಾರಿ ಅವರಿಗೆ ಭಾರವಾಗಿದೆ. ಒತ್ತಡ ಜಾಸ್ತಿ ಆಗಿದೆ. ಹೀಗಾಗಿ ಬಳ್ಳಾರಿ ಉಸ್ತುವಾರಿಯನ್ನ ಸಚಿವ ಶ್ರೀರಾಮುಲು ಅವರಿಗೆ ನೀಡಿ ಎಂದಿದ್ದಾರೆ.

ವಿಜಯನಗರ ಜಿಲ್ಲೆ ಆದಮೇಲೆ ಆನಂದ್ ಸಿಂಗ್ ಹುಮ್ಮಸ್ಸಿನಲ್ಲಿದ್ದಾರೆ. ಹೀಗಾಗಿ ಬಳ್ಳಾರಿ ಉಸ್ತುವಾರಿಯನ್ನೇ ಮರೆತಿದ್ದಾರೆ. ಶ್ರೀರಾಮುಲುಗೆ ನೀಡಿ ಅವರ ಮೇಲಿನ ಭಾರ ಕಡಿಮೆ ಮಾಡಬೇಕು ಎಂದಿದ್ದಾರೆ.

ಬಳಿಕ ಅದೇ ಸಭೆಯಲ್ಲಿ ನಾತನಾಡಿದ ಆನಂದ್ ಸಿಂಗ್, ಬಿಜೆಪಿ ಶಿಸ್ತಿನ ಪಕ್ಷ. ಕೆಲವೊಂದು ಲೋಪ ದೋಷವಿದೆ. ಕೆಲವರಿಗೆ ಅಧಿಕಾರದ ದಾಹ ಇರಬಹುದು. ಕೆಲವೊಂದು ವಾದ ವಿವಾದ ಮಾಡಲು ಅದರದ್ದೇ ವೇದಿಕೆ ಇರುತ್ತೆ. ಅದನ್ನ ಅಲ್ಲಿಯೇ ಚರ್ಚೆ ಮಾಡಬೇಕು ಎಂದು ಮಾತಿನಲ್ಲೇ ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *