ಕೊಳೆತ ಸ್ಥಿತಿಯಲ್ಲಿ ಶಾಸಕ ರೇಣುಕಾಚಾರ್ಯ ಅಣ್ಣನ ಮಗನ ದೇಹ ಪತ್ತೆ..!

1 Min Read

 

ದಾವಣಗೆರೆ: ಕಳೆದ ಐದು ದಿನದಿಂದ ರೇಣುಕಾಚಾರ್ಯ ಅವರ ಪುತ್ರ ಕಾಣೆಯಾಗಿದ್ದರು. ಸಾಕಷ್ಟು ಹುಡುಕಾಟದ ನಂತರ ಇದೀಗ ಕಾಲುವೆಯೊಂದರಲ್ಲಿ ಕಾರು ಪತ್ತೆಯಾಗಿದೆ. ಕಾರಿನಲ್ಲಿ ಮೃತದೇಹ ಕೂಡ ಸಿಕ್ಕಿದೆ. ನ್ಯಾಮತಿ ಮತ್ತು ಹೊನ್ನಾಳಿ ಮಧ್ಯೆ ಇರುವ ಕಾಲುವೆಯಲ್ಲಿ ಕಾರು ಪತ್ತೆಯಾಗಿದೆ.

ಚಾನಲ್ ಒಂದರಲ್ಲಿ ಕಾರು ಬಿದ್ದಿದ್ದು, ಅದರ ಪಕ್ಕದಲ್ಲಿ ಬಿಡಿ ಭಾಗಗಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಪೊಲೀಸರು ಅಗ್ನಿಶಾಮಕ ದಳ, ಸಿಬ್ಬಂದಿಗಳನ್ನು ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದಾಗ ಅದರೊಳಗೆ ಕಾರು ಇದ್ದದ್ದು ಬೆಳಕಿಗೆ ಬಂದಿದೆ. ಸದ್ಯ ಅದರೊಳಗೆ ಮೃತದೇಹ ಕೂಡ ಪತ್ತೆಯಾಗಿದೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಹಿಂಬದಿ ಸೀಟಿನಲ್ಲಿ ಮೃತದೇಹ ಪತ್ತೆಯಾಗಿದೆ.

ಕಿಡ್ನ್ಯಾಪ್ ಮಾಡಿ ಬಿಸಾಕಿ ಹೋಗಿದ್ದರು ಎಂಬ ಹಲವು ಮಾತುಗಳು ಕೇಳಿ ಬಂದಿತ್ತು ಆದ್ರೆ ಮೇಲ್ನೋಟಕ್ಕೆ ಇದೊಂದು ಆಕ್ಸಿಡೆಂಟ್ ಎಂಬಂತೆ ಕಾಣುತ್ತಿದೆ ಎನ್ನಲಾಗಿದೆ. ಚಂದ್ರುಶೇಖರ್ ಎಲ್ಲಿಗೆ ಹೋದರು ಒಬ್ಬನೇ ಹೋಗುತ್ತಾ ಇರಲಿಲ್ಲ ಎಂಬ ಮಾತಿದೆ. ಚಿಕ್ಕಮಗಳೂರಿಗೆ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದು, ಶಿವಮೊಗ್ಗಕ್ಕೆ ಹೋಗುವಾಗ ವಿನಯ್ ಅವರನ್ನು ಬಿಟ್ಟು ಹೋಗುವಾಗ ಈ ಘಟನೆ ನಡೆದಿದೆ. ಇದು ಅನುಮಾನಕ್ಕೆ ಕಾರಣವಾಗಿದೆ.

ಪೊಲೀಸರು ಇನ್ನಷ್ಟು ತನಿಖೆ ನಡೆಸಿದ ನಂತರ ಸತ್ಯಾಸತ್ಯತೆ ಹೊರಗೆ ಬರಲಿದೆ. ಮೃತದೇಹ ಚಂದ್ರಶೇಖರ್ ಅವರದ್ದೇ ಎಂದು ಗುರುತಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *