ಕಾಂಗ್ರೆಸ್ ಕಾರ್ಯಕರ್ತರಿಗೆ ವಾರ್ನಿಂಗ್ ಕೊಟ್ಟ ಶಾಸಕ ಪ್ರದೀಪ್ ಈಶ್ವರ್ : ಕಾರಣ ಏನು ಗೊತ್ತಾ..?

suddionenews
1 Min Read

 

ಚಿಕ್ಕಬಳ್ಳಾಪುರ: ಕೆ ಸುಧಾಕರ್ ಅವರ ಭದ್ರಕೋಟೆಯಾಗಿದ್ದ ಚಿಕ್ಕಬಳ್ಳಾಪುರವನ್ನು ಈ ಬಾರಿ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಪ್ರದೀಪ್ ಈಶ್ವರ್, ಜಿಲ್ಲೆಯಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇದೀಗ ಸಭೆಯೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಎಚ್ವರಿಕೆಯನ್ನು ನೀಡಿದ್ದಾರೆ.

ಶಾಸಕ ಪ್ರದೀಪ್ ಈಶ್ವರ್ ಇಂದು ನೂತನ ಶಾಸಕ ಕಚೇರಿಯನ್ನು ಉದ್ಘಾಟಿಸಿದರು. ಈ ವೇಳೆ ಕಾರ್ಯಕರ್ತರ ನೂಕು ನುಗ್ಗಲು ಆಗಿತ್ತು. ಇದಕ್ಕೆ ಪ್ರದೀಪ್ ಈಶ್ವರದ ಗರಂ ಆಗಿದ್ದರು. ಶಿಸ್ತು ಪಾಲನೆ ಮಾಡದೆ ಹೋದರೆ ಬೆಂಡೆತ್ತಿ ಬ್ರೇಕ್ ಹಾಕಿ ಬಿಡ್ತೀನಿ ಎಂಬ ಮಾತನ್ನು ಆಡಿದ್ದಾರೆ.

ಸಾಮಾನ್ಯವಾಗಿ ಕಾನೂನಿನ ಪ್ರಕಾರ ಶಾಸಕರ ಕಚೇರಿಗೆ ಬಂದರೆ ಕೆಲಸವಾಗುತ್ತದೆ. ಸಾಮಾನ್ಯವಾಗಿ ನನ್ನವರಾದರೂ ಅಷ್ಟೇ ಬೇರೆಯವರಾದರೂ ಅಷ್ಟೇ. ಕಾನೂನು ಮೀರಿದರೆ ಶಾಸಕರ ಕಚೇರಿಗೆ ಎಂಟ್ರಿನೂ ಕೊಡಲ್ಲ. ನಾನು ಹಳೆ ಶಾಸಕರ ತರ ಅಲ್ಲ. ನಿಮ್ಮನ್ನೆಲ್ಲ ಹಳೆ ಶಾಸಕರು ಕೆಡಿಸಿ ಇಟ್ಟಿದ್ದಾರೆ. ಶಿಸ್ತು ಪಾಲನೆ ಮಾಡದೆ ಹೋದರೆ, ನನ್ನ ಸ್ವಂತ ಅಣ್ಣ ತಮ್ಮಂದಿರೆ ಆದರೂ ಬೆಂಡೆತ್ತಿ ಬ್ರೇಕ್ ಹಾಕುತ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *