ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆಯಲ್ಲಿ ನೂತನ ಓ.ಪಿ.ಡಿ. ಕೊಠಡಿ ಉದ್ಘಾಟಿಸಿದ ಶಾಸಕ ಬಿ.ಜಿ.ಗೋವಿಂದಪ್ಪ

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 03 : ಧವಳಗಿರಿ ಬಡಾವಣೆಯಲ್ಲಿರುವ ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನೂತನ ಒ.ಪಿ.ಡಿ. ಕೊಠಡಿಯನ್ನು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಉದ್ಗಾಟಿಸಿದರು.

 

ಅಮೇರಿಕನ್ ಆರ್ಥೋಪಿಡಿಕ್ ಅಸೋಸಿಯೇಷನ್ ಸದಸ್ಯ, ಕೀಲು ಮೂಳೆ ಮತ್ತು ಬೆನ್ನು ಮೂಳೆ ತಜ್ಞ ಡಾ.ಕೆ.ಜಗದೀಶ್ ಇಲ್ಲಿ ಚಿಕಿತ್ಸೆ ನೀಡುತ್ತಿರುವುದು ಈ ಭಾಗದ ಜನರಿಗೆ ಅನುಕೂಲವಾಗಲಿದೆ. ದೊಡ್ಡ ದೊಡ್ಡ ನಗರಗಳಿಗೆ ಹೋಗಿ ಬಡ ರೋಗಿಗಳು ಚಿಕಿತ್ಸೆ ಪಡೆಯುವುದು ಕಷ್ಟವಾಗುತ್ತದೆನ್ನುವುದನ್ನು ಮನಗಂಡು ಡಾ.ಎನ್.ಬಿ.ಪ್ರಹ್ಲಾದ್ ದಿಟ್ಟ ಹೆಜ್ಜೆಯಿಟ್ಟುರುವುದು ದೊಡ್ಡ ಸಾಧನೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಗುಣಗಾನ ಮಾಡಿದರು.

 

ಡಾ.ಎನ್.ಬಿ.ಪ್ರಹ್ಲಾದ್, ಶೈಲಶ್ರಿ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಜೆ.ಎಸ್.ಗುರುಮೂರ್ತಿ, ಡಾ.ಶಶಿಕಿರಣ್ ಗುಡೆಕೋಟೆ,
ಈಶ್ವರಪ್ಪ, ಶ್ರೀಕಾಂತ್ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *