ಶಾಸಕರನ್ನು ಬಿಟ್ಟು ದಿಶಾ ಸಭೆ ನಡೆಸುವುದು ಸೂಕ್ತವಲ್ಲ : ಸಂಸದೆ ಸುಮಲತಾ ವಿರುದ್ಧ ಅನ್ನದಾನಿ ಕಿಡಿ

1 Min Read

 

ಬೆಂಗಳೂರು: ಶಾಸಕರನ್ನು ಬಿಟ್ಟು ದಿಶಾ ಸಭೆ ನಡೆಸುವುದು ಸೂಕ್ತವಲ್ಲ ಎಂದು ವಿಧಾನಸಭೆಯಲ್ಲಿ ಮಳವಳ್ಳಿ ಕ್ಷೇತ್ರದ ಶಾಸಕ ಅನ್ನದಾನಿ ಕಿಡಿಕಾರಿದ್ದಾರೆ.

ಅನೌಪಚಾರಿಕವಾಗಿ ದಿಶಾ ಸಭೆ ಕರೆದಿರುವ ಬಗ್ಗೆ ಮಾಹಿತಿ ಲಭಿಸಿದೆ. ಅಧಿವೇಶನ ನಡೆಯುವಾಗ ಯಾಕೆ ದಿಶಾ ಸಭೆ ನಡೆಸುತ್ತಿದ್ದಾರೆ..? ನಾವೆಲ್ಲಾ ದಿಶಾ ಸಭೆಯ ಸದಸ್ಯರು. ನಮ್ಮನ್ನು ಬಿಟ್ಟು ಸಭೆ ನಡೆಸಿದರೆ. ಸದಸ್ಯರನ್ನು ಬಿಟ್ಟು ಸಭೆ ನಡೆಸುವುದು ಸೂಕ್ತವಲ್ಲ. ದಿಶಾ ಸಭೆ ಮುಂದೂಡುವಂತೆ ಹೇಳಿದ್ದೇನೆ. ಚರ್ಚೆ ಮಾಡಿ ತಿಳಿಸುವುದಾಗಿ ಜಿಲ್ಲಾಧಿಕಾರಿ ಕೂಡ ಹೇಳಿದ್ದರು. ಆದ್ರೆ ಇಲ್ಲಿಯ ತನಕ ಜಿಲ್ಲಾಧಿಕಾರಿ ಕರೆ ಮಾಡಿಲ್ಲ.

ಸಂಸದರು ಬೇಕು ಅಂತಾನೆ ನಮ್ಮನ್ನು ಬಿಟ್ಟು ಸಭೆ ನಡೆಸುತ್ತಿದ್ದಾರೆ ಅಂತ ಸಂಸದೆ ಸುಮಲತಾ ವಿರುದ್ಧ ಶಾಸಕ ಅನ್ನದಾನಿ ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *