ಗಲ್ಲಿ ಸಮಸ್ಯೆ ಹೇಳಲು ಕರೆ ಮಾಡಿದ ಮಹಿಳೆಗೆ ಆವಾಜ್ ಹಾಕಿದ ಶಾಸಕ..!

suddionenews
1 Min Read

 

ಬೆಳಗಾವಿ: ಜನಪ್ರತಿನಿಧಿಗಳು ಎಂದರೆ ಜನರ ಸಮಸ್ಯೆ ಆಲಿಸಬೇಕು ಅಲ್ಲವೆ. ಅದನ್ನ ಬಿಟ್ಟು ತಾವೂ ನೋಡಲ್ಲ, ಸಮಸ್ಯೆ ಹೇಳಲು ಬಂದವರಿಗೂ ಸರಿಯಾದ ರೆಸ್ಪಾನ್ಸ್ ಮಾಡಲ್ಲ ಅಂದ್ರೆ ಜನಪ್ರತಿನಿಧಿಗಳು ಯಾತಕ್ಕಾಗಿ ಎಂಬ ಪ್ರಶ್ನೆ ಜನರಿಗೆ ಮೂಡಿಯೇ ಮೂಡುತ್ತೆ. ಯಾಕಂದ್ರೆ ಅಂತದ್ದೊಂದು ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಬೆಳಗಾವಿ ಉತ್ತರ ವಿಧನಾಸಭಾ ಕ್ಷೇತ್ರದ ಶಾಸಕ ಅನಿಲ್ ಬೊನಕೆ ಮಹಿಳೆಯೊಬ್ಬರಿಗೆ ಆವಾಜ್ ಹಾಕಿದ್ದಾರೆ. ಶಾಸಕ ಅನಿಲ್ ಗೋವಾ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿದ್ದರಂತೆ. ಆಗ ಬಾಂಧುರ ಗಲ್ಲಿಯ ಮಹಿಳೆಯೊಬ್ಬರು ತಮ್ಮ ಸಮಸ್ಯೆ ಹೇಳಲು ಕರೆ ಮಾಡಿದ್ದಾರೆ.

ಸರ್ ಗಲ್ಲಿಯ ಡ್ರೈನೇಜ್ ಹಾಳಾಗಿ ಮನೆಯೊಳಗೆ ನೀರು ಬರ್ತಿದೆ. ಇದರ ಪರಿಣಾಮ ಜನರು ಆಸ್ಪತ್ರೆಗೆ ಸೇರುತ್ತಿದ್ದಾರೆ. ಆದಷ್ಟು ಬೇಗ ಸರಿ ಮಾಡಿಸಿ ಸರ್ ಎಂದಿದ್ದಷ್ಟೇ, ಆ ಕಡೆಯಿಂದ ಆ ಕೆಲಸ ಆಗಬೇಕು.. ಈ ಕೆಲಸ ಆಗಬೇಕು ಅಂತ ಹೇಳೋಕೆ‌ ನೀವೂ ಯಾರು..? ಗೋವಾ ಚುನಾವಣಾ ಪ್ರಚಾರದಲ್ಲಿದ್ದೇನ ಬರ್ತೀನಿ ಇಡು ಅಂತ ಏಕವಚನದಲ್ಲೇ ಆವಾಜ್ ಹಾಕಿ ಕರೆ ಕಟ್ ಮಾಡಿದ್ದಾರೆ. ಆ ಆಡಿಯೋ ವೈರಲ್ ಆಗಿದ್ದು, ಶಾಸಕರ ನಡತೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *