ಶಾಲೆಯ ನೀರಿನ ಟ್ಯಾಂಕ್ ಗೆ ವಿಷ : ಅದೃಷ್ಟವಶಾತ್ ಅನಾಹುತದಿಂದ ಪಾರಾದ ಮಕ್ಕಳು..!

suddionenews
1 Min Read

ಮಡಿಕೇರಿ: ಕೊಡಗು ಜಿಲ್ಲೆಯ ಸೋಮಾವಾರ ಪೇಟೆಯ ಸುಂಟಿಕೊಪ್ಪ ಶಾಲೆಯಲ್ಲಿ ಭಾರಿ ಅನಾಹುತವಾಗುತ್ತಿತ್ತು. ಶಾಲಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಆ ಅನಾಹುತ ಕೈ ತಪ್ಪಿದೆ. ಮಕ್ಕಳ ಜೀವ ಉಳಿದಿದೆ.

ಸುಂಟಿಕೊಪ್ಪದಲ್ಲಿರುವ ಶಾಲೆಯ ಟ್ಯಾಂಕರ್ ಒಳಗೆ ಕಿಡಿಗೇಡಿಗಳು ವಿಷ ಬೆರೆಸಿದ್ದಾರೆ. ಇದನ್ನ ನೋಡದೆ ನೀರು ಕುಡಿದಿದ್ದರೆ ಮಕ್ಕಳು, ಶಿಕ್ಷಕರು, ಸಿಬ್ಬಂದಿಯ ಗತಿ ಏನಾಗ್ತಾ ಇತ್ತು. ಆದ್ರೆ ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ.

ಸರ್ಕಾರಿ ಶಾಲೆಯ ನೀರಿನ ಟ್ಯಾಂಕರ್ ಗೆ ವಿಷ ಬೆರೆಸಲಾಗಿತ್ತು. ಬೆಳಗ್ಗೆ ಶೌಚಾಲಯ ಶುಚಿಗೊಳಿಸಲು ಸಿಬ್ಬಂದಿ ಲತಾ ಹೋದಾಗ ಈ ವಿಚಾರ ಬೆಳಕಿಗೆ ಬಂದಿದೆ. ಲತಾ ತಕ್ಷಣ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಆ ನೀರನ್ನ ಯಾರು ಉಪಯೋಗಿಸದಂತೆ ಮಕ್ಕಳಿಗೂ ಸೂಚನೆ ನೀಡಲಾಗಿದೆ. ನಂತರ ಸುಂಡಿಕೊಪ್ಪ ಪೊಲೀಸ್ ಠಾಣೆಗೆ ಶಾಲಾ ಆಡಳಿತ ಮಂಡಳಿ ದೂರು ನೀಡಿದೆ.

ಈ ಮುಂಚೆಯೂ ಶಾಲಾ ಆವರಣದಲ್ಲಿ ಪುಂಡರ ಹಾವಳಿ ಜಾಸ್ತಿಯಾಗಿದೆ ಎಂದು ದೂರು ನೀಡಲಾಗಿತ್ತು. ಆದ್ರೂ ಏನು ಪ್ರಯೋಜನವಾಗಿಲ್ಲ. ಪುಂಡರು ಮದ್ಯ ಕುಡಿದು ಬಾಟೆಲ್ ಗಳನ್ನ ಬಿಸಾಕುವುದು, ಸಿಗರೇಟ್ ಸೇದಿ ಬಿಸಾಡುವುದು ಹೀಗೆ ಸಾಕಷ್ಟು ಅಸಹ್ಯ ಮಾಡಿ ಬಿಸಾಕುತ್ತಿದ್ದರು. ಈಗ ಮತ್ತೆ ಈ ಘಟನೆ ಸಂಬಂಧ ಮತ್ತೆ ದೂರು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *