Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿದ್ದರಾಮಯ್ಯ ವಿರುದ್ಧ ಸಚಿವ ಸುನಿಲ್ ಕುಮಾರ್ ವಾಗ್ದಾಳಿ

Facebook
Twitter
Telegram
WhatsApp

ಬೆಂಗಳೂರು: ಇತ್ತೀಚಿನ ದಿನದಲ್ಲಿ ವಿಪಕ್ಷ ನಾಯಕ ತಮ್ಮ ಘನತೆ, ಗೌರವ ಬಿಟ್ಟು ಅಸಂಭದ್ದವಾಗಿ ಮಾತನಾಡೋದು ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.

ಈ ವೇಳೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯಾವುದೇ ಮಾತು ಎಲ್ಲೆ ಮೀರಬಾರದು. ಇತ್ತೀಚಿನ ಭಾಷಣ ಗೌರವ ನೀಡುತ್ತಿಲ್ಲ. ವಿನಾಕಾರಣ RSS ಮದ್ಯ ಎಳೆದು ತರುತ್ತಿದೆ, ಪ್ರಧಾನಿಯವರನ್ನ ಎಳೆದು ತರುತ್ತಿದ್ದಾರೆ. ಅವರು ಅಸಹಾಯಕರಾಗಿದ್ದು, ಆಗ ಈ ರೀತಿ ಹೇಳಿಕೆ ಬರುತ್ತದೆ. ಒಂದು ಚೌಕಟ್ಟಿನಲ್ಲಿ ವಿರೋಧ ಮಾಡಬೇಕು. ಅದು ವಿಪಕ್ಷದ ಕೆಲಸ ಕೂಡ ಹೌದು. ಹಾಗಂತ ವಿನಾಕಾರಣ RSS ಎಳೆದು ತರೋದು ಸರಿಯಲ್ಲ,ನಾವು ಕೂಡ ಅದರಲ್ಲೇ ಬೆಳೆದು ಬಂದಿದ್ದು ಎಂದರು. ನಿಮಗೆ ಜ್ಞಾನದ ಕೊರತೆ, ಮಾಹಿತಿ ಕೊರತೆ ಇದೆ.

ನಿಮಗೆ ಸಲಹೆ ಕೊಡುವವರ ಕೊರತೆ ಇದೆ.ಇನ್ನೊಬ್ಬರಿಂದ ಸಲಹೆ ಪಡೆದು, ಉತ್ತಮ ಜ್ಞಾನ ಪಡೆಯಿರಿ ಅಂತ ಸಲಹೆ ನೀಡಿದರು. ಇನ್ನೂ ಮೋದಿಯವರ ಬಗ್ಗೆ ಟೀಕೆ ಮಾಡಿದ್ರೆ, ಅವರ ಗೌರವ ಹೆಚ್ಚಾಗಲಿದೆ.ಇನ್ನಾದ್ರೂ ಮುಂದಿನ ದಿನಗಳಲ್ಲಿ ಎಚ್ಚರಿಕೆ ಮಾತನಾಡೋದು ನಿಮ್ಮಹಿರಿತನಕ್ಕೆ ಒಳಿತು.
ನಾವು ನಿಮ್ಮ ಸಮಕಾಲೀನರಲ್ಲ. ಇನ್ನೊಬ್ಬರನ್ನ ನೋಡಿ ಕಲಿಯೋಣ ಅನ್ನೋದು ನನ್ನ ಉದ್ದೇಶ. ನಿಮ್ಮನ್ನ ನೋಡಿ ಕಲಿಯೋ ವಿಚಾರ ಕಡಿಮೆಯಾಗ್ತಿದೆ. ಇನ್ನೊಬ್ಬರಿಗೆ ಮಾದರಿಯಾಗುವಂತೆ ವಿಪಕ್ಷ ನಾಯಕರಾಗಿ. ಕೇಸರಿ ಬಗ್ಗೆ ನಿಮಗೆ ಯಾಕೆ ವಿರೋಧ ಗೊತ್ತಿಲ್ಲ ಕೇಸರಿ ತ್ಯಾಗದ ಸಂಕೇತ. ಕೇಸರಿ ಕಂಡ್ರೆ ಯಾಕೆ‌ ವಿಚಲಿತರಾಗ್ತೀರಾ ಗೊತ್ತಿಲ್ಲ ಎಂದು ಹೇಳಿದರು.

ನಮ್ಮ ಪರಂಪರೆಯನ್ನ ಮರೆಯಬಾರದು.ವಿಜಯ ದಶಮಿಯ ದಿನ ಆಯುಧ ಪೂಜೆ ಮಾಡ್ತಾರೆ.ಬಿಜೆಪಿ ಸರ್ಕಾರ ಬಂದ ನಂತ್ರ ಬಂದಿದ್ದಲ್ಲ. ಎಲ್ರೂ ಹಬ್ಬ ಮಾಡ್ತಾರೆ, ಪೊಲೀಸರು ಒಂದೊಂದು ಸ್ಟೇಷನ್‌ನಲ್ಲಿ ಒಂದೊಂದು ರೀತಿಯಲ್ಲಿ ಉಡುಪು ಧರಿಸಿದರು. ಕೇಸರಿ ಒಂದು ಪಕ್ಷದ್ದು ಅಂತ ಯಾಕೆ ಮೀಸಲಿಡ್ತೀರಾ. ಕೇಸರಿ ಕಂಡ್ರೆ ಯಾಕೆ ವಿಚಲಿತರಾಗ್ತೀರಾ ಎಂದು ಪ್ರಶ್ನಿಸಿದರು.

ನಾಳೆ ಕುಂಕುಮ ಇಟ್ರೂ ವಿರೋಧ ಮಾಡ್ತೀರಾ.
ಕೇಸರಿ ಶಾಲನ್ನ ಯಾರೇ ಹಾಕಿದ್ರೂ ಸಮರ್ಥನೆ ಮಾಡಿಕೊಳ್ತೀವಿ. ಕಾಂಗ್ರೆಸ್ ಸರ್ಕಾರ ಬಂದಾಗ ಹಸಿರು ಶಾಲು ಹಾಕಿದ್ರೆ ಏನು ಮಾಡ್ತೀರಾ ಅನ್ನೋ ಪ್ರಶ್ನೆಗೆ
ಅದನ್ನ ಹಾಕಿದ ಮೇಲೆ ನೋಡೋಣ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಎಂ, ಡಿಸಿಎಂ ಬಿಗ್ ರಿಲೀಫ್ : ಬಿಜೆಪಿ ಜಾಹೀರಾತು ಕೇಸ್ ವಿಚಾರಕ್ಕೆ ಜಾಮೀನು

  ಬೆಂಗಳೂರು: ಬಿಜೆಪಿ ವಿರುದ್ಧ ಜಾಹೀರಟತು ನೀಡಿದ್ದರ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರುಗೆ ಜಾಮೀನು ಮಂಜೂರಾಗಿದೆ. ಈ ಮೂಲಕ ಇಬ್ಬರು ರಿಲ್ಯಾಕ್ಸ್ ಆಗಿದ್ದಾರೆ. ಖಾಸಗಿ‌ ಮಾನನಷ್ಟ ಕೇಸಲ್ಲಿ ಇದೀಗ

ವಾಲ್ಮೀಕಿ ನಿಗಮ ಹಗರಣ ಕೇಸ್ : ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ವಾಲ್ಮೀಕಿ ನಿಗಮದ ಪ್ರಕರಣ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದರಿಂದ ಅಧೀಕ್ಷಕ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರ, ತನಿಖೆ ನಡೆಸುತ್ತಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆಯನ್ನು ನೀಡಿದ್ದಾರೆ.  

ಸಿಎಂ, ಡಿಸಿಎಂ ವಿರುದ್ಧ ಶತ್ರು ಭೈರವಿಯಾಗದ ಆರೋಪ : ಕೇರಳ ಸರ್ಕಾರ ಹೇಳಿದ್ದೇನು..?

  ಇತ್ತಿಚೆಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಒಂದು ಶಾಕಿಂಗ್ ನ್ಯೂಸ್ ಒಂದನ್ನು ಹೇಳಿದ್ದರು. ಕೇರಳದಲ್ಲಿ ನನ್ನ, ಸಿಎಂ ಹಾಗೂ ಸರ್ಕಾರದ ವಿರುದ್ಧ ಶತ್ತು ಭೈರವಿ ಯಾಗ ಮಾಡುತ್ತಿದ್ದಾರೆ. ಅದನ್ನು ಯಾರು ಮಾಡುತ್ತಿದ್ದಾರೆ, ಅದರಲ್ಲಿ ಯಾರೆಲ್ಲಾ

error: Content is protected !!