ಹುಚ್ಚುಚ್ಚಾಗಿ ಮಾತಾಡಿದ್ರೆ ಏನು ಮಾಡೋಕಾಗಲ್ಲ, ಬಸವರಾಜ್ ನಮ್ಮವರಲ್ಲ : ಮಾಧುಸ್ವಾಮಿ

1 Min Read

 

ತುಮಕೂರು: ಸಚಿವ ಮಾಧುಸ್ವಾಮಿ ಕಿಮ್ ಜಾಂಗ್ ಉನ್ ಥರ ಅಂತ ಸಂಸದ ಬಸವರಾಜ್ ಗುಸುಗುಸು ಅಂತ ಮಾತನಾಡಿದ್ರು. ಆ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಸಂಸದ ಬಸವರಾಜ್ ಅವರ ಹೇಳಿಕೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಅವರು ನಮ್ಮವರಲ್ಲ ಬಿಡಿ ಎಂದಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೋ ಹುಚ್ ಹುಚ್ಚಾಗಿ ಮಾತಾಡ್ತಾರೆ ಅಂದ್ರೆ ಅದಕ್ಕೆಲ್ಲಾ ಉತ್ತರ ಕೊಡೋಕೆ ಆಗಲ್ಲ. 12 ಗಂಟೆಗೆ ಕ್ಯಾಬಿನೆಟ್ ಸಭೆ ಇತ್ತು. ಹೀಗಾಗಿ ಸಮಯವಾಗುತ್ತೆ ಅಂತ 9.30ಗೆ ಹೊರಡಬೇಕು ಎಂದು ಮೊದಲೇ ಹೇಳಿದ್ದೆ. ಆದ್ರೆ 10 ಗಂಟೆಯಾದರೂ ಆಯೋಜಕರು ಸಭೆ ಮುಗಿಸಲಿಲ್ಲ. ತಡವಾಗುವ ಕಾರಣ ನಾನು ಎದ್ದು ಬಂದೆ. ಆ ಸುದ್ದಿಗೋಷ್ಟಿಯಲ್ಲಿ ನಾನು ಕೂಡ ಭಾಗಿಯಾಗಿದ್ದೆ.

12 ಗಂಟೆಗೆ ಕ್ಯಾಬಿನೇಟ್ ಇದ್ದರೂ ಅರ್ಧ ಗಂಟೆ ಮುಂಚೆಯೇ ಹೋಗಬೇಕಿತ್ತು. ರೋಡ್ ಗಳು ಕೆಲವೊಂದು ಕಡೆ ಬ್ಲಾಕ್ ಆಗಿರೋ ಕಾರಣ ಸಂಚಾರ ತಡವಾಗುತ್ತೆ ಅಂತ ಹೊರಟೆ. ಸಭೆಯಲ್ಲಿರುವಾಗ್ಲೇ ಸಿಎಂ ಅವರು ಎರಡು ಬಾರಿ ಕರೆ ಮಾಡಿದ್ದರು. ಹೀಗಾಗಿ ಬೇಗ ಹೊರಟೆ. ನನಗೆ ಬೇರೆಯವರ ವಿಚಾರ ತಿಳಿದಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *