ಚಿತ್ರದುರ್ಗ : ಕಾಂಗ್ರೆಸ್ ನಾಯಕರಿಗೆ ಬುಲಾವ್ ಕೊಟ್ಟ ಬಿಜೆಪಿ ಸಚಿವ..!

1 Min Read

 

ಚಿತ್ರದುರ್ಗ, (ಜ.02) : ಮೂರು ಪಕ್ಷದಲ್ಲೂ ಪಕ್ಷಾಂತರ ನಡೆಯುತ್ತಲೇ ಇರುತ್ತದೆ. ಒಂದು ಪಕ್ಷದಲ್ಲಿದ್ದವರು ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ. ಇದೀಗ ಸಚಿವ ಗೋವಿಂದ ಕಾರಜೋಳ ನಗು ನಗುತ್ತಲೇ ಕಾಂಗ್ರೆಸ್ಸಿಗರನ್ನು ಬಿಜೆಪಿಗೆ ಬರ್ತೀರಾ ಎಂದಿದ್ದಾರೆ.

ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ಕಾಂಗ್ರೆಸ್ ಶಾಸಕರೊಬ್ಬರು ಬಿಜೆಪಿ ಸೇರಲಿದ್ದಾರೆ. ನೀವೂ ಸೇರ್ತೀರಾ ಎಂದರು. ನೀಂದ್ರಪಾ ಸುಮ್ಮನೆ, ನೀನು ಕೂಡ ಸದ್ಯದಲ್ಲೇ ಬಿಜೆಪಿಗೆ ಬರ್ತೀಯಾ ಬಿಡು ಅಂತ ಆಕ್ಷೇಪ ವ್ಯಕ್ತಪಡಿಸಿದ ಪಾವಗಡದ ಶಾಸಕ ವೆಂಕಟರಮಣ ಅವರ ಮಾತಿಗೆ ಉತ್ತರ ನೀಡಿದ್ರು.

ಆದ್ರೆ ಈ ಮಧ್ಯೆ ಸಚಿವ ಗೋವಿಂದ ಕಾರಜೋಳ ನಗೆ ಪಟಾಕಿ ಹಾರಿಸಿದ್ರು, ನಾವೆಲ್ಲಾ ಹಳೆ ಸ್ನೇಹಿತರು. ಹೀಗಾಗಿ ಕಾಮಿಡಿ ಮಾಡ್ತೀವಿ. ಅದರಲ್ಲೇನಿದೆ ಎಂದರು. ಆದ್ರೆ ಸುದ್ದಿಗೋಷ್ಟಿಯಲ್ಲಿ ಸಚಿವ ಕಾರಜೋಳ ಹೇಳಿದ ಆ ಕಾಂಗ್ರೆಸ್ ಶಾಸಕ ಯಾರೆಂಬುದೇ ಎಲ್ಲರ ಪ್ರಶ್ನೆ. ಅದು ಕೂಡ ನಗೆ ಪಟಾಕಿಯ ಅಥವಾ ಯಾರಾದ್ರೂ ಹೋಗುವವರು ಇದ್ದಾರಾ ಎಂಬ ಪ್ರಶ್ನೆ ಒಂದಷ್ಟು ಜನರ ತಲೆ ಹೊಕ್ಕಿದೆ.

Share This Article
Leave a Comment

Leave a Reply

Your email address will not be published. Required fields are marked *