Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎಲ್ಲಾ ಕ್ಷೇತ್ರದಲ್ಲೂ ಕರ್ನಾಟಕ ನಂಬರ್ ಒನ್, ಮಸಿ ಬಳಿಯುವ ಕೆಲಸ ಮಾಡಬೇಡಿ : ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಸಚಿವ ಅಶ್ವತ್ಥ್ ನಾರಾಯಣ್

Facebook
Twitter
Telegram
WhatsApp

ಬೆಂಗಳೂರು: ಸಿದ್ದರಾಮಯ್ಯ ಪೂರ್ತಿ confuse ಆಗಿಬಿಟ್ಟವರೆ. ಪಾಪ ಅವ್ರಿಗೆ ತಳಮಳ ಆಗೋಗಿದೆ. ಏನಂದ್ರೆ ಏನು ಹೇಳಬೇಕು ಗೊತ್ತಾಗ್ತಿಲ್ಲ ಅವ್ರಿಗೆ. ಯೂನಿಫಾರ್ಮ್ ಹಾಕೊಳಿ ಅಂತ ಹೇಳಬೇಕೋ ಬೇಡ ಅಂತ ಹೇಳಬೇಕಾ ಗೊತ್ತಾಗ್ತಿಲ್ಲ. ಈ ಸ್ಪಷ್ಟತೆ ಅವರನ್ನು ಕಾಡುತ್ತಿದೆ. ಈ ಸ್ಪಷ್ಟತೆ ಇಲ್ಲದ ಕಾರಣ ಯಾವ ರೀತಿಯ ನಿಲುವನ್ನು ತೆಗೆದುಕೊಳ್ಳಬೇಕು ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಗೊಂದಲವಾಗಿದೆ ಎಂದಿದ್ದಾರೆ.

ಸಮವಸ್ತ್ರ ಹಾಕಿಕೊಳ್ಳಬೇಕು ಅಂದ್ರೆ ಯಾಕೆ ಹಾಕಿಕೊಳ್ಳಬೇಕು, ಯಾವ ಕಾಲದಲ್ಲಿ ಮಾಡಿದ್ರು. ಹಾಕಿಕೊಳ್ಳಬೇಕು ಬೇಕು ಅಂತ ಇದ್ದಾಗ ಹಾಕಿಕೊಳ್ಳಿ ಅಂತ ಹೇಳಬೇಕು ತಾನೇ ಗೊಂದಲ ಯಾಕೆ..? ಇವತ್ತು ಬೇರೆ ಬೇರೆ ಕಾನೂನು ಮಾಡೋಕೆ ಆಗುತ್ತಾ..? ಕಾನೂನು ಒಂದೇ ಇರುತ್ತೆ. ಅದನ್ನು ಪಾಲನೆ ಮಾಡುವಂತದ್ದು ಈ ಪಕ್ಷಗಳಿಗೆ ಇರಬೇಕು.

ಬರೀ ಒಲೈಕೆ ಮಾಡುವ ಕೆಲಸವನ್ನೆ ಮಾಡುತ್ತಾ ಬಂದಿದ್ದಾರೆ. ಇನ್ಬಾದರೂ ಈ ಒಲೈಕೆ ಮಾಡೋದನ್ನ ನಿಲ್ಲಿಸಿ ಕಾನೂನಿಗೆ ಗೌರವ ಕೊಡಿ. ನಮ್ಮ ಮಾತುಗಳನ್ನು ಗೌರವಿಸಬೇಡಿ ಕಾನೂನು ಗೌರವಿಸಿ ಸಾಕು. ಆಗ ತನಗೆ ತಾನೇ ಸಮಸ್ಯೆಗಳು ಬಗೆಹರಿಯುತ್ತವೆ. ಕಾನೂನು ಯಾರಪ್ಪ ಅಂದ್ರೆ ಕಷ್ಟ. ಅವರು ಮಾಡಿರುವ ಕಾನೂನನ್ನೇ ಅವರು ಗೌರವಿಸಲಿ ಸಾಕು.

 

ಆಜಾನ್ ವಿಚಾರದಲ್ಲಿ, ಹಿಜಾಬ್, ಸಮವಸ್ತ್ರ ಇನ್ನೊಂದು ಎಲ್ಲದರಲ್ಲೂ ಕಾನೂನು ಪಾಲಿಸಿ. ನಾಡಿಗೆ ಅವಮಾನ ಮಾಡಬೇಡಿ. ಕನ್ನಡ ನಾಡು ಒಂದು ಸೌಹಾರ್ದಯುತವಾಗಿ, ಪ್ರಗತಿಯುತವಾಗಿ, ಸಮೃದ್ಧಿಯಿಂದ ಇಡೀ ವಿಶ್ವದ ಮಾನ್ಯತೆ ಪಡೆದಿದೆ. ಆವಿಷ್ಕಾರ, ತಂತ್ರಜ್ಞಾನ ಯಾವ ಕ್ಷೇತ್ರದಲ್ಲಿ ಆಗಲಿ ಕರ್ನಾಟಕ ಮೇಲ್ಪಂಕ್ತಿಯಲ್ಲಿದೆ. ಹಾಗಾಗಿ ಮಸಿ ಬಳಿಯುವ ಕೆಲಸ ಮಾಡಬೇಡಿ. ರಾಜಕೀಯ ಪಕ್ಷಗಳು ಕಾನೂನು ಪಾಲಿಸಿ, ಪಾಲಿಸಲು ಸೂಚಿಸಿ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕುಡಿಯುವ ನೀರಿನ ಸಮಸ್ಯೆ : ಮತದಾನ ಬಹಿಷ್ಕರಿಸಿದ್ದವರಿಂದ ಸಂಜೆ ವೇಳೆಗೆ ಮತದಾನ..!

ಚಿತ್ರದುರ್ಗ : ಇಂದು ಕರ್ನಾಟಕದಲ್ಲಿ ಮೊದಲ ಲೋಕಸಭಾ ಚುನಾವಣೆಗೆ ನಡೆದಿದೆ. ಎಷ್ಟೇ ಜಾಗೃತಿ ಮೂಡಿಸಿದರು ಸಾಕಷ್ಟು ಮಂದಿ ಮತದಾನ ಮಾಡಿಲ್ಲ. ಪರಿಪೂರ್ಣ ಮತದಾನ ನಡೆದಿಲ್ಲ. ಚುನಾವಣೆ ಬಂದಾಗೆಲ್ಲಾ ಜಾಗೃತಿ ಕಾರ್ಯ ನಡೆದರು ಮತದಾನ ಪೂರ್ಣವಾಗುವುದರಲ್ಲಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 5 ರವೇಳೆಗೆ ಶೇಕಡಾವಾರು ಮತದಾನ ಎಷ್ಟು ? 

ಚಿತ್ರದುರ್ಗ.ಏ.26: ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಏ.26 ರಂದು  ಜರುಗಿದ ಮತದಾನದಲ್ಲಿ ಸಂಜೆ 5 ಗಂಟೆ ವೇಳೆಗೆ  ಶೇ.67 ರಷ್ಟು ಮತದಾನ ದಾಖಲಾಗಿದೆ. ಸಂಜೆ 6 ಗಂಟೆಯವರೆಗೂ ಮತ ಚಲಾಯಿಸಲು ಅವಕಾಶವಿದ್ದು, ಮತದಾರರು ಉತ್ಸಾಹ ತೋರಿ

ಮತದಾನಕ್ಕೂ ಮುನ್ನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರು ಮತದಾನಕ್ಕೂ ಮುನ್ನ

error: Content is protected !!