ನಾನೇನು ತಜ್ಞನಲ್ಲ : ಶಿಶುಗಳ‌ಮರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಆನಂದ್ ಸಿಂಗ್

suddionenews
1 Min Read

 

ವಿಜಯನಗರ: ಬಳ್ಳಾರಿ, ವಿಜಯನಗರದಲ್ಲಿ ಶಿಶುಗಳ ಮರಣ ಹೆಚ್ಚಾಗುತ್ತಿದೆ.‌ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನೇನು ತಜ್ಞನಲ್ಲ ಎಂದು ಸಚಿವ ಆನಂದ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ಜಿಲ್ಲೆಯ ಹೊಸಪೇಟೆಯಲ್ಲಿ ಮಾತನಾಡಿದ ಆನಂದ್ ಸಿಂಗ್, ಶಿಶುಗಳ ಮರಣ ಸಂಬಂಧ ತಜ್ಞರ ಜೊತೆ ಮಾತಾನಾಡುತ್ತೇನೆ. ಸಮಸ್ಯೆ ಪರಿಹರಿಸೋ ಪ್ರಯತ್ನ ಮಾಡ್ತೇವೆ. ಈ ಕುರಿತು ಸರ್ಕಾರಕ್ಕೂ ಮಾಹಿತಿ ನೀಡ್ತೇವೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ತೇವೆ. ಶಿಶುಗಳ ಮರಣಕ್ಕೆ ಕಾರಣ ಏನೆಂಬುದನ್ನು ಪತ್ತೆ ಹಚ್ತೇವೆ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ಇನ್ನು ಶಿಶು‌ ಮರಣಗಳ ಬಗ್ಗರ ಸಚಿವ ಸುಧಾಕರ್ ಬೆಂಗಳೂರಿನಲ್ಲಿ ಮಾತನಾಡಿದ್ದು, ಶಿಶು ಮರಣಗಳ ಸಂಬಂಧ ಚರ್ಚಿಸಲು ಸಭೆ ನಡೆಸಲಾಗುತ್ತದೆ. ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳಲು ಸೂಚನೆ ನೀಡಲಾಗುತ್ತದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *