Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರೇಣುಕಾಸ್ವಾಮಿ ಮೃತದೇಹ ಸಾಗಿಸಲು ಲಕ್ಷಾಂತರ ಖರ್ಚು: ಹಣದ ಮೂಲದ ಹಿಂದೆ ಬಿದ್ದ ಐಟಿ ಅಧಿಕಾರಿಗಳು..!

Facebook
Twitter
Telegram
WhatsApp

 

ಬಳ್ಳಾರಿ: ನಟ ದರ್ಶನ್ ರೇಣುಕಾಸ್ವಾಮಿ ಕೊಲೆಯಲ್ಲಿ ಬಳ್ಳಾರಿ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಜಾಮೀನಿಗೂ ಅರ್ಜಿ ಸಲ್ಲಿಕೆ ಮಾಡಿದ್ದು, ವಿಚಾರಣೆ ಕೂಡ ನಡೆಯುತ್ತಿದೆ. ಈ ಕೇಸಲ್ಲಿ ಈಗಾಗಲೇ ಮೂವರಿಗೆ ಜಾಮೀನು ಸಿಕ್ಕಿದೆ. ಆ ಮೂವರು ಕೊಲೆಯಲ್ಲಿ ಭಾಗಿಯಾದವರಲ್ಲ. ಮೃತದೇಹ ಸಾಗಿಸಲು ಹಣ ಪಡೆದು, ಸೆರಂಡರ್ ಆದವರು. ಹೀಗಾಗಿ ಆ ಮೂವರಿಗೆ ಜಾಮೀನು ನೀಡಲಾಗಿದೆ. ಇದೀಗ ಐಟಿ ಅಧಿಕಾರಿಗಳು ದರ್ಶನ್ ಹಣದ ಮೂಲದ ಹಿಂದೆ ಬಿದ್ದಿದ್ದಾರೆ.

ಅಂದ್ರೆ ರೇಣುಕಾಸ್ವಾಮಿ ಕೊಲೆಯ ಬಳಿಕ ಮೃತದೇಹ ಸಾಗಿಸುವುದಕ್ಕೇನೆ 30 ಲಕ್ಷ ಹಣ ನೀಡಿದ್ದರು. ಹೀಗಾಗಿ ಆ ಹಣವೆಲ್ಲಾ ಎಲ್ಲಿಂದ ಬಂತು ಎಂಬ ಮೂಲ ಕಂಡು ಹಿಡಿಯಲು ಹೊರಟಿದ್ದಾರೆ. ಹೀಗಾಗಿ ದರ್ಶನ್ ಅವರನ್ನು ಭೇಟಿಯಾಗಲು ಐಟಿ ಅಧಿಕಾರಿಗಳು ಜೈಲು ಅಧಿಕಾರಿಗಳಿಗೆ ಸಮಯವನ್ನು ಕೇಳಿದ್ದಾರೆ. ಸಮಯ ನೀಡಿದ ಬಳಿಕ ಐಟಿ ಅಧಿಕಾರಿಗಳು ಬಳ್ಳಾರಿ ಜೈಲಿಗೆ ಭೇಟಿ ನೀಡಲಿದ್ದಾರೆ.

ಜೈಲು ಅಧಿಕಾರಿಗಳಿಗೆ ಈ ಸಂಬಂಧ ಈಗಾಗಲೇ ಮೇಲ್ ಕೂಡ ಬಂದಿದೆ. ದರ್ಶನ್ ಅವರ ಭೇಟಿಗೆ ಸಮಯಾವಕಾಶ ನೀಡುವಂತೆ ಮನವಿ ಮಾಡಿ ಮೇಲ್ ಮಾಡಿದ್ದಾರೆ. ಯಾಕಂದ್ರೆ ರೇಣುಕಾಸ್ವಾಮಿ ಕೊಲೆಯ ಬಳಿಕ ಆ ಕೇಸನ್ನು ಇನ್ನೊಬ್ಬರ ಮೇಕೆ ಹಾಕುವ ಹುನ್ನಾರ ನಡೆದಿತ್ತು. ಹಣದ ಆಮಿಷವೊಡ್ಡಿ ಪೊಲೀಸರ ಮುಂದೆ ತಪ್ಪೊಪ್ಪಿಕೊಳ್ಳುವಂತೆ ಸೂಚನೆ ನೀಡಿದ್ದರು. ಅದಕ್ಕೆ ಸರಿಯಾಗಿ ಕೇಶವಮೂರ್ತಿ, ಕಾರ್ತಿಕ್, ನಿಖಿಲ್ ಆ ತಪ್ಪನ್ನು ಒಪ್ಪಿಕೊಂಡು ಪೊಲೀಸರ ಮುಂದೆ ಸೆರಂಡರ್ ಆಗಿದ್ದರು. ಆಮೇಲೆ ಪೊಲೀಸರ ತನಿಖೆಯ ಬಳಿಕ ಸತ್ಯ ಹೊರಗೆ ಬಂದಿದ್ದು, ದರ್ಶನ್ ಅಂಡ್ ಗ್ಯಾಂಗ್ ಸಿಕ್ಕಿಬಿದ್ದಿತ್ತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ನಾಳೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.28 : ಸುಖಾಯು‌ ಆಯುರ್ವೇದ ಕ್ಲಿನಿಕ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಹಾಗೂ ಉಚಿತ ಆರೋಗ್ಯ ಸಲಹಾ ಶಿಬಿರವನ್ನು ನಗರದ ಸಾದಿಕ್ ನಗರದ ನಿವಾಸಿಗಳಿಗೆ ನಾಳೆ (ಸೆಪ್ಟೆಂಬರ್. 29 ರ ಭಾನುವಾರ)

ಈ ರಾಶಿಯವರ ಜೊತೆ ಮದುವೆಯಾಗಿ ಕೆಲವೇ ದಿನವೊಳಗೆ ಬಯಲಾಯಿತು ದುರ್ಬುದ್ಧಿ!

ಈ ರಾಶಿಯವರಿಗೆ ಕೈ ತುಂಬಾ ಹಣಪ್ರಾಪ್ತಿ. ಈ ರಾಶಿಯವರ ಜೊತೆ ಮದುವೆಯಾಗಿ ಕೆಲವೇ ದಿನವೊಳಗೆ ಬಯಲಾಯಿತು ದುರ್ಬುದ್ಧಿ! ಶನಿವಾರರಾಶಿ ಭವಿಷ್ಯ -ಸೆಪ್ಟೆಂಬರ್-28,2024 ಇಂದಿರಾ ಏಕಾದಶಿ ಸೂರ್ಯೋದಯ: 06:09, ಸೂರ್ಯಾಸ್ತ : 06:03 ಶಾಲಿವಾಹನ ಶಕೆ

ಎರಡನೆ ದಿನಕ್ಕೆ ಕಾಲಿಟ್ಟ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಪ್ರತಿಭಟನೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 27 : ಮೊಬೈಲ್ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಹೆಚ್ಚಿನ ಒತ್ತಡವಾಗುವುದು ಸೇರಿದಂತೆ

error: Content is protected !!