Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮೇಲುಕೋಟೆಯಲ್ಲಿ ತಂಗಿ ಕೊಳ ಕಲುಷಿತ : ತಮಿಳು ಸಿನಿಮಾ ಶೂಟಿಂಗ್ ವೇಳೆ ಮಾಡಿದ ಯಡವಟ್ಟೇ ಕಾರಣವಂತೆ..!

Facebook
Twitter
Telegram
WhatsApp

ಮಂಡ್ಯ: ಐತಿಹಾಸಿಕ ಕ್ಷೇತ್ರದ ಪೈಕಿ, ಜಿಲ್ಲೆಯ ಮೇಲುಕೋಟೆ ಕೂಡ ಒಂದು. ಚೆಲುವನಾರಾಯಣ ಸ್ವಾಮಿ ನೋಡಲು ಭಕ್ತರ ದಂಡು ಹರಿದು ಬರುತ್ತಿರುತ್ತೆ. ಜೊತೆಗೆ ದೇವಸ್ಥಾನಕ್ಕೆ ದೂರದೂರಿನಿಂದ ಬರುವವರು ಒನ್ ಡೇ ಟ್ರಿಪ್ ಪ್ಲಾನ್ ನನ್ನೇ ಮಾಡಿಕೊಂಡಿರುತ್ತಾರೆ. ಹಾಗೇ ಮೇಲುಕೋಟೆಯಲ್ಲಿರುವ ಸುಂದರ ಸ್ಥಳಗಳನ್ನ ನೋಡೋಕೆ ಅಂತಾನೇ ಪ್ರವಾಸಿಗರು ಬರ್ತಾರೆ. ಅಲ್ಲಿನ ನೀರು, ಕಲ್ಲಿನ ಮಂಟಪಗಳೆಲ್ಲಾ ಸುಂದರವಾಗಿದ್ದು, ಫೋಟೋಶೂಟ್ ಮಾಡಿಕೊಳ್ಳೋದಕ್ಕೂ ಬರ್ತಾರೆ. ಆದ್ರೆ ಅಲ್ಲಿನ ವಾತಾವರಣ ಕಲುಷಿತಗೊಂಡರೆ ಹೇಗೆ..?

ತಮಿಳಿನ ಸಿನಿಮಾವೊಂದರ ಶೂಟಿಂಗ್ ನಡೆದಿದ್ದು, ಅಲ್ಲಿನ ಫೇಮಸ್ ತಂಗಿ ಕೆರೆ ಕಲುಷಿತಗೊಂಡಿದೆ. ಪವಿತ್ರ ಹಾಗೂ ಶುದ್ಧತೆಗೆ ಹೆಸರಾಗಿದ್ದ ತಂಗಿ ಕೆರೆ ಇದಾಗಿದೆ. ಆದ್ರೆ ಈಗ ಕಲುಚಿತಗೊಂಡಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಮೇಲುಕೋಟೆಯಲ್ಲಿ ಅಕ್ಕ-ತಂಗಿ‌ ಕೆರೆಯಿದೆ. ಆ ಎರಡು ಕೆರೆ ಖ್ಯಾತಿ ಪಡೆದಿವೆ. ಅದಕ್ಕೆ ಆದ ಪುರಾಣದ ಕಥೆಯಿದೆ. ಹಾಗೇ ಅಕ್ಕನ ಕೆರೆಯ ನೀರು ಗಡುಸಾಗಿದ್ದು, ಕುಡಿಯಲು ಯೋಗ್ಯವಲ್ಲ. ಅಲ್ಲೆ ಪಕ್ಕದಲ್ಲಿರುವ ತಂಗಿ ಕೆರೆಯ ನೀರನ್ನ ಚೆಲುವನಾರಾಯಣಸ್ವಾಮಿ ಅಭಿಷೇಕ, ದೇವರ ಕೆಲಸಗಳಿಗೆ ಬಳಕೆ ಮಾಡಲಾಗುತ್ತೆ. ಆದ್ರೆ ಈಗ ಆ ನೀರು ಕಲುಷಿತಗೊಂಡಿದೆ.

ಕಳೆದ ತಿಂಗಳು ಮೇಲುಕೋಟೆಗೆ ತಮಿಳಿನ ಚಿತ್ರವೊಂದು ಚಿತ್ರೀಕರಣಕ್ಕೆಂದು ಬಂದಿತ್ತು. ತಂಗಿ‌ ಕೆರೆಗೆ ಹೂಗಳು, ಬಣ್ಣವನ್ನ ಬಳಸಲಾಗಿತ್ತು. ಹೀಗಾಗಿ ನೀರು ಸಂಪೂರ್ಣ ಕಲುಷಿತಗೊಂಡಿದೆ. ಆ ಸಿನಿಮಾದ ಯಡವಟ್ಟಿನಿಂದಾಗಿ ಆ ನೀರಿನ ಬಳಕೆ ಮಾಡಲಾಗುತ್ತಿಲ್ಲ. ಇದು ದೇವಸ್ಥಾನದ ಭಕ್ತರಿಗೂ ಬೇಸರ ಉಂಟು ಮಾಡಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನೈರುತ್ಯ ಪದವೀಧರ ಚುನಾವಣೆ : ಬಂಡಾಯವೆದ್ದ ರಘುಪತಿ ಭಟ್ ಗೆ ಬೆಂಬಲ ನೀಡಿದ ಈಶ್ವರಪ್ಪ

ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ಹಾಗೂ ರಘುಪತಿ ಭಟ್ ಇಬ್ಬರು ಈಗ ಒಂದೇ ದೋಣಿಯ ಪಯಣಗಿರು. ಯಾಕಂದ್ರೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಈಶ್ವರಪ್ಪ ಅವರು ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.

ನಮ್ಮ ವಿದ್ಯಾಸಂಸ್ಥೆಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ : ಡಾ.ಕೆ.ಎಂ.ವಿರೇಶ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಮೇ. 21:  ನನ್ನ ವಿದ್ಯಾ ಸಂಸ್ಥೆಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಾಧ್ಯವಾದಷ್ಟು ಉಚಿತವಾದ ಶಿಕ್ಷಣವನ್ನು ನೀಡಲಾಗುವುದು

ಪಕ್ಷಕ್ಕಾಗಿ ದುಡಿದವರಿಗೆ ಅಧಿಕಾರ ಕೊಡಬೇಕೆಂಬ ಪರಿಕಲ್ಪನೆ ರಾಜೀವ್‍ಗಾಂಧಿಯವರಲ್ಲಿತ್ತು : ಕೆ. ಅನಂತ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 21: ತಳಮಟ್ಟದಿಂದ ಪಕ್ಷಕ್ಕಾಗಿ ದುಡಿದವರಿಗೆ ಅಧಿಕಾರ ಕೊಡಬೇಕೆಂಬ ಪರಿಕಲ್ಪನೆ ರಾಜೀವ್‍ಗಾಂಧಿಯವರಲ್ಲಿತ್ತು ಎಂದು ಜಿಲ್ಲಾ ಕಾಂಗ್ರೆಸ್

error: Content is protected !!