ಧ್ಯಾನ ಮೆದುಳಿನ ಆರೋಗ್ಯಕ್ಕೆ ಉತ್ತಮ : ಡಾ. ಕಿರಣ್ ಗೌಡ

1 Min Read

ಸುದ್ದಿಒನ್, ಚಿತ್ರದುರ್ಗ, ಜುಲೈ. 25 : ಮಗು ಜನಿಸಿದಾಗಿನಿಂದ ಸಾಯುವವರೆಗೂ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ದಿನದಲ್ಲಿ 15 ನಿಮಿಷ ಧ್ಯಾನವನ್ನು ಮಾಡಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ನರರೋಗ ತಜ್ಞ ಡಾ. ಕಿರಣ್ ಗೌಡ ಆರ್. ಹೇಳಿದರು.

ನಗರದ ಜಿಲ್ಲಾ ಆಸ್ಪತ್ರೆಯ ಬಿಸಿ ರಾಯ್ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಚಿತ್ರದುರ್ಗ, ಜಿಲ್ಲಾ ಮಾನಸಿಕ ಕಾರ್ಯಕ್ರಮ ವಿಭಾಗ ಮತ್ತು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮೆದುಳು ದಿನ ಮತ್ತು ಉಚಿತ ನರ ರೋಗಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ರವೀಂದ್ರ ಎಸ್.ಪಿ. ಮಾತನಾಡಿ, ಮೆದುಳು ದೇಹಕ್ಕೆ ಮುಖ್ಯವಾಗಿ ಬೇಕು. ಜನಸಾಮಾನ್ಯರು ಕರ್ನಾಟಕ ಮೆದುಳು ಮತ್ತು ಆರೋಗ್ಯದ ಕಾರ್ಯಕ್ರಮವು ಜಿಲ್ಲೆಯ ಪ್ರತಿ ಹಳ್ಳಿ ಜನರು ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬೇಕ ಎಂಬುದನ್ನು ವಿವರಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ. ನಾಗರಾಜ್ ಜಿ ಓ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಚಿಕಿತ್ಸೆಯ ಬಗ್ಗೆ ವಿವರಿಸಿ ವಿಶ್ವ ಮೆದುಳು ದಿನ ಘೋಷವಾಕ್ಯದ ಬಗ್ಗೆ ಮಾತನಾಡಿದರು.

ಈ ಕಾರ್ಯಕ್ರಮಕ್ಕೆ ಕೃಷ್ಣ ನಾಯಕ್ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಕಾರ್ಯಕ್ರಮವನ್ನು ನಿರೂಪಿಸಿದರು.
ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ ವೈದ್ಯಾಧಿಕಾರಿಗಳಾದ ಡಾ. ಶಿವ ಸಾಧ್ವಿನಿ ಮತ್ತು ಭಾಷಾ ರೋಗ ತಜ್ಞರಾದ ಶ್ರೀಮತಿ ದಿವ್ಯ ಜಿಜೆ, ಫಿಜಿಯೋಥೆರಪಿಸ್ಟ್ ಭಾವನಾ ಕೆ, ಮನಶಾಸ್ತ್ರಜ್ಞರಾದ ರೂಪಚಾವಡಿ, ನರ್ಸಿಂಗ್ ಆಫೀಸರ್ ರಂಜಿತಾ ನಾಗರಾಜ್, ಶ್ರೀಧರ್ ಟಿ, ಮನಶಾಸ್ತ್ರಜ್ಞರು, ನರ್ಸಿಂಗ್ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರು ಕಾರ್ಯಕ್ರಮವನ್ನು ಭಾಗವಹಿಸಿದರು ಜಿಲ್ಲಾ ಸಂಯೋಜಕರು ಶರತ ಪಿ ಕಾರ್ಯಕ್ರಮವನ್ನು ವಂದಿಸಿದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks