ಸಿದ್ದರಾಮಯ್ಯ ನೂರು ಕಾಲ ಬದುಕಲಿ : ಸಿಎಂ ಬೊಮ್ಮಾಯಿ

suddionenews
1 Min Read

 

ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ಎಲೆಕ್ಷನ್ ಗೆ ನಿಲ್ಲುವ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ಇನ್ನು ಬದುಕುವ ಆಸೆ ಇದೆ. ಆದ್ರೆ ಎಷ್ಟು ವರ್ಷ ಬದುಕುತ್ತೀನೋ ಇಲ್ಲ ಅನ್ನೋದು ಗೊತ್ತಿಲ್ಲ ಎಂದಿದ್ದರು. ಸಿದ್ದರಾಮಯ್ಯ ಅವರ ಈ ಮಾತಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಸಿದ್ದರಾಮಯ್ಯ ಅವರು ಭಾವನಾತ್ಮಕವಾಗಿ ಮತ ಕೇಳುತ್ತಿದ್ದಾರೆ. ಸಿದ್ದರಾಮಯ್ಯ ನೂರು ಕಾಲ ಬಾಳಲಿ ಎಂಬುದೇ ನಮ್ಮ ಆಸೆ ಎಂದಿದ್ದಾರೆ.

ಜಿಲ್ಲೆಯ ಕಡೂರಿನಲ್ಲಿ ಮಾತನಾಡಿದ ಬೊಮ್ಮಾಯಿ ಅವರು, ನಾನು ಸಿಎಂ ಆಗಬೇಕು ಅಂದ್ರೆ ನೀವೂ ಮತ ಹಾಕಬೇಕು. ಇನ್ನು ಎಷ್ಟು ವರ್ಷ ಇರುತ್ತೀನೋ ಎಂಬ ಮಾತನ್ನು ಹೇಳಿ ಮತ ಕೇಳುತ್ತಿದ್ದಾರೆ. ಆರೋಗ್ಯ ಸರಿ ಇಲ್ಲ ಎನ್ನುವುದನ್ನು ಹೇಳಿ ಮತ ಕೇಳುತ್ತಿದ್ದಾರೆ. 2013ರಲ್ಲಿಯೂ ಜನರಲ್ಲಿ ಇದೇ ರೀತಿ ಮಾತನಾಡಿದ್ದರು.

ಅವರು ಚೆನ್ನಾಗಿರಲಿ, ಅವರ ಆರೋಗ್ಯ ಚೆನ್ನಾಗಿರಲಿ ಎಂದು ನಾನು ಕೂಡ ಪ್ರಾರ್ಥಿಸುತ್ತೇನೆ. ಆರೋಗ್ಯ ಸರಿ ಇಲ್ಲ ಮಾತು ಹೇಳಿ ಮತ ಕೇಳುತ್ತಿದ್ದಾರೆ. ಜನ ಅದನ್ನು ನಂಬಿ ವೋಟು ಹಾಕುತ್ತಾರೆ. ಅವರ ಆಡಳಿತದಲ್ಲಿ ಕೊಲೆ, ಸುಲಿಗೆ ಜಾಸತಿಯಾಗಿಯೇ ಇತ್ತು. ಜನ ಅಂಥದ್ದನ್ನೆಲ್ಲಾ ನಂಬುವ ಸ್ಥಿತಿಯಲ್ಲಿಲ್ಲ. 2018ರ ಚುನಾವಣೆಯಲ್ಲಿ ಸೋಲಿಸಿ ವಿರೋಧ ಪಕ್ಷದ ಸ್ಥಾನವನ್ನು ನೀಡಿದ್ದಾರೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *