ಮಂಡ್ಯ: 2023ರ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆಯದೆ ಇರುವ ಜಾಗದಲ್ಲೂ ಕಮಲ ಅರಳಿಸುವ ಪಣ ತೊಟ್ಟಿದ್ದಾರೆ ಬಿಜೆಪಿ ನಾಯಕರು. ಅದರಲ್ಲೂ ಈ ಬಾರಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಗೆಲುವಿಗಾಗಿ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಅದಕ್ಕೆಂದೆ ಹೈಕಮಾಂಡ್ ನಾಯಕರು ವಿಸಿಟ್ ಮಾಡುತ್ತಾ ಇದ್ದಾರೆ. ಅದರ ಜೊತೆಗೆ ಈಗ ಮಂಡ್ಯದಲ್ಲಿ ಉಸ್ತುವಾರಿಯೇ ಬಿಜೆಪಿಗೆ ದೊಡ್ಡ ತಲೆನೋವಾಗಿದೆ.
ಮಂಡ್ಯ ಗೆಲ್ಲುವುದಕ್ಕಾಗಿ ಉಸ್ತುವಾರಿ ಬದಲಾಯಿಸುವ ಸ್ಟಾಟರ್ಜಿ ಬಳಕೆ ಮಾಡಿದ್ರು. ಗೋಪಾಲಯ್ಯನನ್ನು ಉಸ್ತುವಾರಿಯಿಂದ ಕೆಳಗಿಳಿಸಿ, ಅಶೋಕ್ ಅವರನ್ನು ನೇಮಿಸಿದ್ದರು. ಆದರೆ ಮಂಡ್ಯದಲ್ಲಿಯೇ ಗೋ ಬ್ಯಾಕ್ ಅಶೋಕ್ ಎಂಬ ಚಳುವಳಿ ಆರಂಭವಾಗಿತ್ತು. ಬಳಿಕ ಅಶೋಕ್ ಅವರನ್ನು ಉಸ್ತುವಾರಿಯಿಂದ ಕೆಳಗಿಳಿಸಲಾಗಿತ್ತು.
ಮತ್ತೆ ಗೋಪಾಲಯ್ಯ ಅವರಿಗೆ ಗಾಳ ಹಾಕಲಾಗಿತ್ತು. ಆದರೆ ಮತ್ತೊಮ್ಮೆ ಉಸ್ತುವಾರಿಯಾಗುವುದಕ್ಕೆ ಗೋಪಾಲಯ್ಯ ಒಲ್ಲೆ ಎನ್ನಲಿಲ್ಲ ಎಂಬ ಮಾತಿದೆ. ಈಗ ಆ ಸ್ಥಾನಕ್ಕೆ ಸಚಿವ ಅಶ್ವತ್ಥ್ ನಾರಾಯಣ್ ಅವರನ್ನು ನೇಮಕ ಮಾಡುತ್ತಾರೆ ಎನ್ನಲಾಗುತ್ತಿದೆ. ಮಂಡ್ಯದಲ್ಲಿ ಒಕ್ಕಲಿಗ ಸಮುದಾಯವೇ ಹೆಚ್ಚಾಗಿದೆ. ಸದ್ಯ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಮೆರೆದಿದೆ. ಜೆಡಿಎಸ್ ಭದ್ರಕೋಟೆ ಒಡೆಯಲು ಸ್ಟ್ರಾಂಗ್ ಆಗಬೇಕು. ಆದ್ರೆ ಬಿಜೆಪಿಗೆ ಉಸ್ತುವಾರಿಯೇ ತಲೆ ನೋವಾಗಿರವಾಗ ಗೆಲುವು ಅಷ್ಟು ಸುಲಭವಾಗುವುದು ಕಷ್ಟ.