ಮಾಲೂರು ಮಂಜುನಾಥ್ ಸೇರಿದಂತೆ ಹಲವರು ಬಿಜೆಪಿ ಸೇರ್ಪಡೆ : ಆರ್ ಅಶೋಕ್

suddionenews
1 Min Read

ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಶುರುವಾಗುತ್ತೆ. ಇದೀಗ ಇದೇ ವಿಚಾರವಾಗಿ ಸಚಿವ ಆರ್ ಅಶೋಕ್ ಮಾತನಾಡಿ, ಮಾಲೂರು ಮಂಜುನಾಥ್ ಸೇರಿದಂತೆ ಹಲವರು ಬಿಜೆಒಇಗೆ ಸೇರಲಿದ್ದಾರೆ ಎಂದು ಎಸ್ಎಂ ಕೃಷ್ಣ ಅವರಿಗೆ ಮಾಹಿತಿ ನೀಡಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವ ಅಶೋಕ್ ಸೇರಿದಂತೆ ಹಕವರು, ಬಿಜೆಪಿ ಹಿರಿಯ ನಾಯಕ ಎಸ್ ಎಂ ಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಕೋರಿ, ಹೂವೂ ನೀಡಿ, ಅವರ ಆಶೀರ್ವಾದ ಪಡೆದ ಅಶೋಕ್ ಅವರು, ಪಕ್ಷಕ್ಕೆ ಸೇರುವವರ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಮಂಡ್ಯ ಭಾಗದಲ್ಲಿ ಪಕ್ಷ ಬಲವರ್ಧನೆ, ಸಮಾವೇಶಕ್ಕೆ ಎಸ್ ಎಂ ಕರತಷ್ಣ ಅವರ ಬೆಂಬಲ ಕೂಡ ಕೋರಿದ್ದಾರೆ.

ಇದೇ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಮಂಡ್ಯದಲ್ಲಿ ಯುವ ನಾಯಕತ್ವದ ಬದಲಾವಣೆ ಬರಲಿದೆ. ಬ್ಯಾಚ್ ವೈಸ್ ಬಿಜೆಪಿ ಸೇರಲು ರೆಡಿಯಾಗಿದ್ದಾರೆ. ಕೋಲಾರ, ಬಿಜೆಪಿ ಭಾಗದಲ್ಲಿ ಬಿಜೆಪಿ ಸೇರಲಿದ್ದಾರೆ. ನಮ್ಮ ಪಕ್ಷದ ಮೇಲೆ ಯುವಕರಿಗೆ ಜಾಸ್ತಿ ಒಲವಿದೆ ಎಂದಿದ್ದಾರೆ. ಇನ್ನು ಎಸ್ ಎಂ ಕೃಷ್ಣ ಅವರು ಅಶೋಕ್ ಅವರಿಗೆ ಹಾರ ಹಾಕಿ ಸನ್ಮಾನಿಸಿದ್ದಾರೆ. ಇವರೇ ನನ್ನನ್ನು ಬಿಜೆಪಿಗೆ ಕರೆತಂದಿರುವುದು ಎಂದಿದ್ದಾರೆ. ಇದಕ್ಕೆ ಸಚಿವ ಅಶೋಕ್ ಅವರು ಕೂಡ ಖುಷಿಪಟ್ಟರು ಹಿರಿಯರ ಆಶೀರ್ವಾದ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *