ಬಿಜೆಪಿ ಸೇರಲು ಬಯಸಿದ್ದ ಮಲ್ಲಿಕಾರ್ಜುನ್ ಮುತ್ಯಾಲ್ ಕೊಲೆ

suddionenews
1 Min Read

 

ಕಲಬುರಗಿ: ಬಿಜೆಪಿ ಸೇರಲು ನಿರ್ಧರಿಸಿದ್ದ ಜನತಾ ದಳ (ಜಾತ್ಯತೀತ)  64 ವರ್ಷದ ಮಲ್ಲಿಕಾರ್ಜುನ್ ಮುತ್ಯಾಲ್ ಕೊಲೆಯಾಗಿದ್ದಾರೆ.

ಕೊಲೆಯಾಗುವ ಒಂದು ದಿನ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮುತ್ಯಾಳ್ ಭಾಗವಹಿಸಿದ್ದರು.  ಮುತ್ಯಾಳ್ ಕೆಲ ದಿನಗಳ ನಂತರ ಬಿಜೆಪಿ ಸೇರಲು ಸಜ್ಜಾಗಿದ್ದರು.

ಮುತ್ಯಾಲ್ ಅವರ ಶವ ಅವರ ಅಂಗಡಿಯಲ್ಲಿ ಪತ್ತೆಯಾಗಿದೆ ಮತ್ತು ನಗದು ಕಾಣೆಯಾಗಿದೆ, ದರೋಡೆಯಾಗಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.

ನನ್ನ ತಂದೆ ಅಂಗಡಿಯಲ್ಲೇ ಮಲಗಿದ್ದರು. ಇದು ಕಳ್ಳತನವಾಗಿರಬಹುದೆಂಬ ಶಂಕೆ ಇದ್ದು, ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿ ಹಣವನ್ನು ದೋಚಿ ಅಂಗಡಿಯೊಳಗಿದ್ದ ಕೆಲವು ದಾಖಲೆಗಳನ್ನು ಹಾನಿಗೊಳಿಸಿದ್ದಾರೆ ಎಂದು ಮುತ್ಯಾಲರ ಪುತ್ರ ವೆಂಕಟೇಶ್ ಶಂಕೆ ವ್ಯಕ್ತಪಡಿಸಿದ್ದಾರೆ.

ಮುತ್ಯಾಲ್ ಅವರು ಇತ್ತೀಚೆಗೆ ಜೆಡಿ (ಎಸ್) ತೊರೆದು ಬಿಜೆಪಿ ಸೇರಲು ತಯಾರಿ ನಡೆಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *