ದಾವಣಗೆರೆ: ಜಿಲ್ಲೆಯಲ್ಲಿ ಉಪಚುನಾವಣೆಯ ಅಬ್ಬರ ಜೋರಾಗಿದೆ. ಮೊದಲೇ ಕಾಂಗ್ರೆಸ್ ನಿಂದ ಟಿಕೆಟ್ ಸಿಕ್ಕಿಲ್ಲ ಅಂತ ಮುಸ್ಲಿಮರು ರೊಚ್ಚಿಗೆದ್ದಿದ್ದಾರೆ. ಹೀಗಿರುವಾಗ ಎಸ್ ಎಸ್ ಮಲ್ಲಿಕಾರ್ಜುನ ವಿರುದ್ಧ ಸಿ.ಎಂ.ಇಬ್ರಾಹಿಂ ಗಂಭೀರ ಆರೋಪ ಮಾಡಿದ್ದಾರೆ. ನಾವೂ ಇವತ್ತು ದಾವಣಗೆರೆಯಲ್ಲಿ ಎಲ್ಲಾ ಸಮಾಜದ ಸಹಕಾರ ತೆಗೆದುಕೊಂಡು, ಹಿಂದುಳಿದವರು, ದಲಿತರು, ರೈತ ಸಂಘದವರು ಸೇರಿ ಎಲ್ಲರ ಸಹಕಾರ ತೆಗೆದುಕೊಂಡು ಯುವಕ ಆದಿಲ್ ಪಾಷಾನ ಗೆಲ್ಲಿಸಬೇಕು ಎಂದಿದ್ದಾರೆ.
ಆದಿಲ್ ಪಾಷಾಗೆ ಇನ್ನು 32 ವರ್ಷ. ಅನುಭವವೂ ಇದೆ. ತಂದೆಯೂ ಕೂಡ ರಾಜಕಾರಣದಲ್ಲಿ, ಶಿವಶಂಕರಪ್ಪ ಅವರನ್ನ ಗೆಲ್ಲಿಸಿದವರು. ಮೂರು ಎಲೆಕ್ಷನ್ ನಲ್ಲಿ ನಾನೇ ಬಂದಿದ್ದೆ. ನಮ್ಮ ವೋಟ್ ತೆಗೆದುಕೊಳ್ಳೋರು ಎಂಎಲ್ಎ ಆಗೋರು. ಈ ಸಲ ಅವರು ದೊಡ್ಡ ಮನಸ್ಸು ಮಾಡಿ, ಬೇಡ ತಗೊಳಿ, ಬಿಟ್ಟು ಕೊಡ್ತೀವಿ. ನೀವೂ ಯಾರಿಗಾದ್ರೂ ಕೊಡಿ ಅಂತ ಹೇಳೋದನ್ನ ಬಿಟ್ಟು, ಅವರ ಮನೆಗೆ ಹೋದಾಗ ಮುಸ್ಲಿಂ ಸಮಾಜದ ಮುಖಂಡರನ್ನ ಅವಮಾನ ಮಾಡಿ ಕಳುಹಿಸಿದ್ದಾರೆ. ಮುಸ್ಲಿಂ ಸಮುದಾಯದ ಗುರುಗಳನ್ನು ಅವಮಾನ ಮಾಡಿ ಕಳುಹಿಸಿದ್ದಾರೆ.
ಬಿಜೆಪಿ – ಕಾಂಗ್ರೆಸ್ ಹಂಚಿಕೊಂಡಿದೆ. ಐದು ವರ್ಷ ನೀವೂ ಐದು ವರ್ಷ ನಾವೂ ಅಂತ. ಎರಡು ಭ್ರಷ್ಟಾಚಾರ. ಇಬ್ಬರ ವಿರುದ್ಧ ಎದ್ದು ನಿಂತಿದ್ದೀವಿ. ನಮ್ಮತ್ರ ದುಡ್ಡಿಲ್ಲ, ಕಾಸಿಲ್ಲ ನಾವೆಲ್ಲಾ ಹೋರಾಟದಿಂದ ಬಂದಂತವರು. ದಾವಣಗೆರೆಯಲ್ಲಿ ಕಳೆದ 40 ವರ್ಷದಿಂದ ಒಂದೇ ಮನೆಯವರು, ಅದರಲ್ಲೂ 86 ಸಾವಿರ ಮುಸಲ್ಮಾನರು ಇರುವಂತ ಜಾಗದಲ್ಲಿ, ಮುಸ್ಲಿಮರ ಹೋಗಿ ಬೇಡಿಕೊಂಡರು, ಸಿಎಂ ಹತ್ರ ಒಂದೇ ಕುಟುಂಬಕ್ಕೆ ಕೊಟ್ಟಿದ್ದೀರಿ. ಇನ್ನು 22 ವರ್ಷ ಆಗಿಲ್ಲ. ಅವ್ನಿಗೆ ಎಷ್ಟು ವರ್ಷ ಇದೆ ಅಂತ ಗೊತ್ತಿಲ್ಲ. ಅವನನ್ನ ಕರ್ಕೊಂಡ್ ಬಂದು ನಿಲ್ಲಿಸ್ತೀರಿ ಅಂದ್ರೆ ಇದು ಪ್ರಜಾ ಪ್ರಭುತ್ವನಾ..? ಅಲ್ಪಸಂಖ್ಯಾತರಿಗೆ ಕೇಳುವ ಹಕ್ಕಿಲ್ವಾ ಎಂದು ಪ್ರಶ್ನಿಸಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.












